ಬೆಂಗಳೂರು: ಕೇಂದ್ರ ಸರ್ಕಾರ ದೇಶಾದ್ಯಂತ ಸಿಎಎ ಕಾಯ್ದೆ ಅಧಿಸೂಚನೆ ಹೊರಡಿಸಿದೆ. ಕೆಲವು ರಾಜ್ಯಗಳಲ್ಲಿ ಇದನ್ನು ಸ್ವಾಗತಿಸಲಾಗಿದ್ದು ಕೆಲೆವಡೆ ನಿರಾಕರಿಸಲಾಗಿದೆ.ಹಾಗೂ ವಿರೋಧ ಪಕ್ಷವೂ ಇದನ್ನು ನಿರಾಕರಿಸಿದೆ. ಕಾಂಗ್ರಸ್ ಆಡಳಿತದಲ್ಲಿರುವ ನಮ್ಮ ಕರ್ನಾಟಕ ರಾಜ್ಯ ಇದನ್ನು ಸ್ವಾಗತಿಸುವುದೋ ಅಥವಾ ನಿರಾಕರಿಸುವುದೋ ಎಂಬ ಕುತೂಹಲ ಎಲ್ಲರನ್ನು ಕಾಡಿದೆ.
ಆದರೆ ಗೃಹ ಸಚಿವ ಜಿ ಪರಮೇಶ್ವರ್ ಈ ಕರಿತು ಪ್ರತಿಕ್ರಿಯೆ ನೀಡಿದ್ದು, ಇನ್ನೂ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ ನಂತರ ಸ್ವಾಗತಿಸುವುದೋ ಅಥವಾ ನಿರಾಕರಿಸುವುದೋ ಎಂದು ತಿರ್ಮಾನ ತೆಗೆದುಕೊಳ್ಳುಲಾಗುತ್ತದೆ ಎಂದಿದ್ದಾರೆ.