ಬೆಂಗಳೂರು: ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್.ಡಿ ರೇವಣ್ಣ ಕುಟುಂಬದ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ 14 ವರ್ಷಗಳಿಂದ ಕಾರು ಚಾಲಕನಾಗಿದ್ದ ಕಾರ್ತಿಕ್ ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ ಕಾರ್ತಿಕ್ ಅವರು ಇತ್ತೀಚೆಗೆ 13 ಎಕರೆ ಜಮೀನು ಖರೀದಿಸಿದ್ದಾರೆ. ಆ ಜಮೀನಿನ ಪೂಜೆಗೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣಗೆ ಆಹ್ವಾನ ನೀಡಿದ್ದರು. ಭೂಮಿ ಪೂಜೆಗೆ ಬಂದಿದ್ದ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ನಮ್ಮ ಜೊತೆ ಇದ್ದು ಇಷ್ಟೊಂದು ಆಸ್ತಿ ಮಾಡಿದ್ದಾನೆಂದು ಕೆಂಗಣ್ಣು ಬೀರಿದ್ದಾರಂತೆ. ಇದಾದ ಮೇಲೆ ಚಾಲಕ ಕಾರ್ತಿಕ್ ಹಾಗೂ ಆತನ ಪತ್ನಿಯನ್ನ ಕಿಡ್ನಾಪ್ ಮಾಡಿ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾರು ಚಾಲಕ ಕಾರ್ತಿಕ್ ಅವರ ಮೇಲೆ ಹಲ್ಲೆ ಹಾಗೂ ಕಿಡ್ನಾಪ್ ಮಾಡಿರೋದು ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.
ಮತ್ತೊಂದೆಡೆ ಭವಾನಿ ರೇವಣ್ಣ ಅವರು ಕಾರ್ತಿಕ್ ಪತ್ನಿ ಗರ್ಭಿಣಿ ಎಂಬುದನ್ನು ನೋಡದೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ದೂರು ನೀಡಿದ್ರು ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವಂತೆ. ಹಾಗಾಗಿ ಈ ಘಟನೆ ಸಂಬಂಧ ರಾಜ್ಯ ಡಿಜಿಪಿಗೆ ಕಾರ್ತಿಕ್ ಅವರು ದೂರು ನೀಡಿದ್ದಾರೆ.