Bengaluru 28°C
Ad

ಮಗ ಸೂರಜ್​ ಬಂಧನದ ಕುರಿತು ಹೆಚ್​ ಡಿ ರೇವಣ್ಣ ಪ್ರತಿಕ್ರಿಯೆ

Hdrvnna

ಬೆಂಗಳೂರು: ಅಸಹಜ ಲೈಂಗಿಕ‌ ದೌರ್ಜನ್ಯ ಆರೋಪದಡಿ ಬಂಧನವಾದ ಸೂರಜ್ ರೇವಣ್ಣ ಕುರಿತು ತಂದೆ ಹೆಚ್ ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸರ್ಕಾರ ಸೂರಜ್​ ರೇವಣ್ಣ ಪ್ರಕರಣವನ್ನು ಸಿಐಡಿಗೆ ವಹಿಸಿದ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಹೆಚ್ ಡಿ ರೇವಣ್ಣ, ಮಾಡ್ಲಿ ಬಿಡಿ ಯಾರು ಬೇಡ ಅಂದೊರು, ನನಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

Ad
300x250 2

ಕಾರಂಜಿ ಆಂಜನೇಯ ದೇವಸ್ಥಾನದ ಬಳಿ ಮಾತನಾಡಿದ ಹೆಚ್​ ಡಿ ರೇವಣ್ಣ, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿದೆ. ನನಗೆ ದೇವರ ಮೇಲೆ, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಈ ಷಡ್ಯಂತ್ರಕ್ಕೆಲ್ಲ ನಾನು ಹೆದರಿ ಹೋಗಲ್ಲ. ಯಾರು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಈಗ ಹೇಳೊಲ್ಲ, ಇದನ್ನೆಲ್ಲ ಎದುರಿಸುತ್ತೇವೆ. ಕಾಲ ಬಂದಾಗ ಎಲ್ಲ ಹೇಳ್ತೀನಿ. ಆ ಸಮಯ ಬರಲಿ ಎಂದಿದ್ದಾರೆ.

Ad
Ad
Nk Channel Final 21 09 2023
Ad