ಬೆಂಗಳೂರು: ಗುಂಡಿನ ನಶೆಯಲ್ಲಿ ತೆಲಾಡುತ್ತ ಕಾರು ಚಾಲನೆ ಮಾಡುತ್ತಿದ್ದ ಯುವತಿಯನ್ನು ಪ್ರಶ್ನಿಸಿದ ಆಟೋ ಚಾಲಕನ ಮೇಲೆ ಯುವತಿ ಪರಚಿ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ಮಂಗಳವಾರ ನಡುರಾತ್ರಿ ನಡೆದಿದೆ.
ಕಂಠ ಪೂರ್ತಿ ಕುಡಿದು ರಸ್ತೆ ಮಧ್ಯೆ ಅಡ್ಡಾದಿಡ್ಡಿ ಕಾರ್ ಓಡಿಸುತ್ತ ಬಂದ ಯುವತಿಗೆ. ಸರಿಯಾಗಿ ಚಲಾಯಿಸುವಂತೆ ಆಟೋ ಡ್ರೈವರ್ ಡ್ರೈವರ್ ನಿಶಾಂತ್ ಕಾರನ್ನು ಸರಿಯಾಗಿ ಚಲಾಯಿಸುವಂತೆ ಬುದ್ಧಿ ಹೇಳಿದ್ದಾನೆ. ಇದರಿಂದ ರೇಗಿ ಬಾಯಿಗೆ ಬಂದಂತೆ ಬೈದಿರುವ ಯುವತಿ, ಕಾರ್ ನಿಲ್ಲಿಸಿ ಆಟೋ ಅಡ್ಡಗಟ್ಟಿ ಕೈಯಿಂದ ಪರಚಿ ಡ್ರೈವರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ.ಈಕೆಯ ವರ್ತನೆ ದಾರಿಹೋಕರ ವಿಡಿಯೋದಲ್ಲಿ ದಾಖಲಾಗಿದೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.