ಬೆಂಗಳೂರು: ಜಾತ್ರೆಯ ವೇಳೆ ಬೃಹತ್ ಗಾತ್ರದ ತೇರು ಕುಸಿದ ಬಿದ್ದ ಘಟನೆ ಆನೆಕಲ್ ಸಮೀಪ ಕಮ್ಮಸಂದ್ರ ಬಳಿಯ ಹೈಪರ್ ಮಾರ್ಕೆಟ್ ಬಳಿ ನಡೆದಿದೆ. ಹುಸ್ಕೂರು ಮದ್ದುರಮ್ಮ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಸುಮಾರು 120 ಅಡಿ ಎತ್ತರದ ತೇರು ಇದಾಗಿದ್ದು, ಎತ್ತುಗಳು ಮತ್ತು ಟ್ರಾಕ್ಟರ್ಗಳ ನೆರವಿನಿಂದ ಎಳೆದು ತರಲಾಗುತ್ತಿತ್ತ.ತೇರು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಬರುತ್ತಿತ್ತು. ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿ ಬಳಿ ಬಂದಂತೆ ನಿಯಂತ್ರಣ ತಪ್ಪಿ ತೇರು ಎಡಕ್ಕೆ ಉರುಳಿಬಿದ್ದಿದೆ.