ಬೆಂಗಳೂರು: ಲೋಕಸಭಾ ಸಭಾ ಚುನಾವಣೆ ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿದ್ದು ಅಂದು ಎಲ್ಲೆಡೆ ರಜೆ ಘೋಷಿಸಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಘೋಷಿಸಿದ್ದಾರೆ.
ಒಂದು ವೇಳೆ ಖಾಸಗಿ ಸಂಸ್ಥೆಗಳು ರಜೆಯನ್ನು ನಿರಾಕರಿಸಿದ್ದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣ ಆಯೋಗ ಎಚ್ಚರಿ ನೀಡಿದೆ. ಅಲ್ಲದೆ, ಮತದಾನದ ದಿನಗಳಲ್ಲಿ ರಜಾದಿನಗಳನ್ನು ನೀಡಲು ವಿಫಲವಾದರೆ ಕಾರ್ಮಿಕ ಕಾಯ್ದೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮೀನಾ ಒತ್ತಿ ಹೇಳಿದರು. ಏಕೆಂದರೆ ಈ ಮೂಲಕ ಈ ಬಾರಿ ಹೆಚ್ಚಿನ ಮತದಾನದ ಪ್ರಮಾಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.