ಬೆಂಗಳೂರು: “ಯಾವಾಗ ದೇವೇಗೌಡರು ಅವರ ಅಳಿಯನನ್ನ ಬಿಜೆಪಿ ಸಿಂಬಲ್ನಿಂದ ನಿಲ್ಲಿಸಿದ್ರೋ ಅದೇ ಜೆಡಿಎಸ್ನ ಮೊದಲ ಸೂಸೈಡ್ ಅಟೆಮ್ಟ್” ಎಂದು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿರುವ ಅವರು, ನಾನು ನಿರೀಕ್ಷೆ ಮಾಡಿದ್ದೆ, ಅವರ ಪಕ್ಷಕ್ಕೆ ದೊಡ್ಡ ಮುಜುಗರ ಉಂಟಾಗಿದೆ. ಹಾಲಿ ಶಾಸಕರಿದ್ದಾರೆ, ಅವರ ಸ್ಟ್ರೆಂಥ್ ಬಿಜೆಪಿಗೆ ಬೇಕಿತ್ತು. ಬಿಜೆಪಿ ಸ್ಟೈಲೇ ಅದು, ಎಲ್ಲಾ ರಾಜ್ಯದಲ್ಲೂ ಹೀಗೇ ಮಾಡ್ತಾರೆ. ಅದು ಅವರ ಇಂಟರ್ನಲ್ ವಿಚಾರ, ನಾನು ಕಾಮೆಂಟ್ ಮಾಡಲ್ಲ. ಅವರವರ ಪಕ್ಷದ್ದು, ಅವರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ಸಂಸದ ಸದಾನಂದಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಟಿಕೆಟ್ ಸಿಗದವರಿಗೆ ಕರೆದುಕೊಂಡು ಬರೋದು ಸಾಮಾನ್ಯ. ಈ ಹಿಂದೆ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರನ್ನು ಕರೆ ತಂದು ಟಿಕೆಟ್ ನೀಡಿದ್ವಿ. ಜೆಡಿಎಸ್ನವರು ಮೂಡಿಗೆರೆ ಕುಮಾರಸ್ವಾಮಿ, ಆಯನೂರು ಮಂಜುನಾಥ್ ಅವರನ್ನ ಕರೆ ತಂದು ಟಿಕೆಟ್ ನೀಡಿದ್ದರು. ಇದು ರಾಜಕೀಯದಲ್ಲಿ ಸರ್ವಸಾಮಾನ್ಯ. ಇದನ್ನು ಯಾವ ಪಾರ್ಟಿರವರೂ ಮುಚ್ಚಿಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸಿದ್ಧಾಂತ ಮೆಚ್ಚಿ ಬರ್ತಾರೆ ಎಂದು ಮುಕ್ತ ಆಹ್ವಾನ ಇದೆ ಎಂದರೆ.