News Karnataka Kannada
Saturday, April 27 2024
ದಾವಣಗೆರೆ

ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ ಮಹಿಳೆ ಸಹಿತ ಮೂವರು ಮೃತ

Accident.
Photo Credit :

ದಾವಣಗೆರೆ :  ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಆನಗೋಡು ಸಮೀಪದ ಉಳುಪಿನಕಟ್ಟೆ ಫ್ಲೈಓವರ್‌ನಲ್ಲಿ ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿಯಾಗಿ ಮಹಿಳೆ ಸಹಿತ ಮೂವರು ಮೃತಪಟ್ಟಿದ್ದಾರೆ.

ಟ್ರ್ಯಾಕ್ಟರ್‌ ಚಾಲಕ, ದಾವಣಗೆರೆ ತಾಲ್ಲೂಕಿನ ಹಾಲವರ್ತಿಯ ಎಚ್‌.ಬಿ.ಹನುಮಂತಪ್ಪ (40), ಟ್ರ್ಯಾಕ್ಟರ್‌ನಲ್ಲಿದ್ದ ಹಾಲವರ್ತಿಯ ಎಚ್‌.ಡಿ. ಕಿರಣ್‌ (34), ಲಾರಿ ಚಾಲಕನ ಪತ್ನಿ, ನಿಟುವಳ್ಳಿಯ ಅನ್ನಪೂರ್ಣಮ್ಮ (30) ಮೃತಪಟ್ಟವರು. ಹಾಲವರ್ತಿಯ ಬಸವರಾಜ ಮತ್ತು ರೇವಣಸಿದ್ಧಪ್ಪ ಗಾಯಗೊಂಡವರು.

ಟ್ರ್ಯಾಕ್ಟರ್‌ನಲ್ಲಿ ದಾವಣಗೆರೆಯಿಂದ ಪೈಪ್‌ಗಳನ್ನು ತುಂಬಿಸಿಕೊಂಡು ಹಾಲವರ್ತಿ ಕಡೆಗೆ ಹೋಗುತ್ತಿತ್ತು. ದಾವಣಗೆರೆಯಿಂದ ಬೆಂಗಳೂರು ಕಡೆಗೆ ನಿಟುವಳ್ಳಿ ಸಂತೋಷ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯು ಟ್ರ್ಯಾಕ್ಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ. ಲಾರಿಯ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.ಅನ್ನಪೂರ್ಣಮ್ಮ ಅವರು ವಿಧಾನಸೌಧ ನೋಡಬೇಕು ಎಂದು ತನ್ನ ಪತಿ ಜತೆಗೆ ಲಾರಿಯಲ್ಲಿ ಹೊರಟಿದ್ದರು. ಈ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿವೈಎಸ್‌ಪಿ ಬಸವರಾಜ್‌, ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್‌ಐ ನಿಂಗನಗೌಡ ನೆಗಳನೂರು, ಸಿಬ್ಬಂದಿ ಪ್ರಕಾಶ್‌, ರಂಗಸ್ವಾಮಿ, ಅಣ್ಣಯ್ಯ, ನೂರುಲ್ಲಾ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಟ್ರ್ಯಾಕ್ಟರ್‌ ಅನ್ನು ತೆಗಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು