News Karnataka Kannada
Sunday, April 28 2024
ದಾವಣಗೆರೆ

ಇಂದು ದಾವಣಗೆರೆಯಲ್ಲಿ  ವಿಐಪಿ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿರುವ ಸಿಎಂ ಬೊಮ್ಮಾಯಿ

Bengaluru: Cm Bommai to visit Haveri, Dharwad districts
Photo Credit :

ದಾವಣಗೆರೆ : ರಾಜ್ಯದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ​ ಆತಂಕದ ನಡುವೆಯೇ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದಾವಣಗೆರೆಗೆ  ಆಗಮಿಸಲಿದ್ದು, 3 ವಿಐಪಿ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

ಇಂದು ಬೆಳಿಗ್ಗೆ 11.30 ಕ್ಕೆ ದಾವಣಗೆರೆಗೆ ಆಗಮಿಸಿ ಇಲ್ಲಿಯ ತ್ರಿಶೂಲ್ ಕಲಾ ಭವನದಲ್ಲಿ ಏರ್ಪಡಿಸಿರುವ ಕಸಲಾ ರಮಾ ನಾಗರಾಜ ಮತ್ತು ಕಸಲ್ ವಿ.ನಾಗರಾಜ ಇವರ ಸಹೋದರನ ಪುತ್ರ ಚಿ.ರಾ.ವೈಭವ್ ಬಿ. ಕಸಲ್ ಮತ್ತು ಚಿ.ಸೌ.ಐಶ್ವರ್ಯ ಆರ್.ಹೆಚ್ ಇವರ ವಿವಾಹ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸುವರು.

ಮಧ್ಯಾಹ್ನ 12 ಗಂಟೆಗೆ ಶಾಮನೂರು ರಸ್ತೆಯಲ್ಲಿರುವ ಎಸ್.ಎಸ್.ಕನ್ವೆನ್ಷನ್ ಸೆಂಟರ್ ಅಲ್ಲಿ ಹಮ್ಮಿಕೊಂಡಿರುವ ಪೂರ್ಣಿಮಾ ಮತ್ತಿ ಬಿ.ಸಿ.ಚಂದ್ರಶೇಖರ್ ಇವರ ಪುತ್ರ ಚಿ.ರಾ. ವಿವೇಕ್ ಮತ್ತು ಚಿ.ಸೌ. ಮೇಹುಲ್ ಅವರ ವಿವಾಹ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಬಳಿಕ ಮಧ್ಯಾಹ್ನ 12.30ಕ್ಕೆ ಉಮಾ ಮತ್ತು ವೀರಯ್ಯ ದೇವಗಿರಿಮಠ ಇವರ ಪುತ್ರಿ ಚಿ.ಸೌ ಪ್ರಣವಿ (ಮೇಘನಾ) ಮತ್ತು ಚಿ.ರಾ. ಶ್ರೇಯಸ್ ಅವರ ವಿವಾಹ ಅಕ್ಷತಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30 ಕ್ಕೆ ದಾವಣಗೆರೆಯಿಂದ ಹೊರಟು 6 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು