News Karnataka Kannada
Friday, May 03 2024
ಚಿತ್ರದುರ್ಗ

ಮುರುಘಾ ಮಠದ ನೂತನ ಉಸ್ತುವಾರಿಯಾಗಿ ಬಸವಕುಮಾರ ಸ್ವಾಮೀಜಿ ನೇಮಕ

ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಮುರುಘಾ ಮಠದ ನೂತನ ಉಸ್ತುವಾರಿಯಾಗಿ ಬಸವಕುಮಾರ ಸ್ವಾಮೀಜಿ ನೇಮಕಗೊಂಡಿದ್ದಾರೆ. 
Photo Credit : NewsKarnataka

ಚಿತ್ರದುರ್ಗ: ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಮುರುಘಾ ಮಠದ ನೂತನ ಉಸ್ತುವಾರಿಯಾಗಿ ಬಸವಕುಮಾರ ಸ್ವಾಮೀಜಿ ನೇಮಕಗೊಂಡಿದ್ದಾರೆ.

ಮಠದ ಧಾರ್ಮಿಕ ಕಾರ್ಯಕ್ರಮಗಳ ಮುಂದುವರಿಕೆ ಮತ್ತು ಮೇಲುಸ್ತುವಾರಿಗೆ ಬಸವಕುಮಾರ ಸ್ವಾಮೀಜಿಗೆ ಅಧಿಕಾರ ವಹಿಸಲಾಗಿದೆ.

ಬಸವಕುಮಾರ ಸ್ವಾಮೀಜಿ ವಿಜಯಪುರದ ವನಶ್ರೀ ಮಹಾ ಸಂಸ್ಥಾನದ ಫೀಠಾಧಿಪತಿ. ಹಂಪಿ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿ ಎಚ್ ಡಿ ಪಡೆದಿದ್ದಾರೆ.

ಬಸವಕುಮಾರ ಸ್ವಾಮೀಜಿ ಮಠದ ಆಡಳಿತದಲ್ಲಿ ಸಂಪೂರ್ಣ ಸ್ವತಂತ್ರ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಜೊತೆಗೆ ದೈನಂದಿನ ಪೂಜಾ ಕೈಂಕರ್ಯ ನಿರ್ವಹಣೆ ಮಾಡಲಿದ್ದಾರೆ.

ಅದರಂತೆ ಇದೀಗ  ಸಂಪೂರ್ಣ ಖರ್ಚು ವೆಚ್ಚಗಳನ್ನು ಮಠದ ಖಾತೆಯಿಂದ ಬಳಕೆ‌ ಮಾಡಬಹುದಾಗಿದ್ದು, ನ್ಯಾಯಾಲಯದಲ್ಲಿ ಯಾವುದೇ ಮೊಕದ್ದಮೆ ಹೂಡಲು ಕಮಿಟಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಸರ್ವೋಚ್ಛ ನ್ಯಾಯಾಲಯ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು