ಚಿಕ್ಕಬಳ್ಳಾಪುರ: ಇಂದು ರಾಜ್ಯದೆಲ್ಲೆಡೆ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದ್ದು, ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದುಬರುತ್ತಿದೆ. ಇನ್ನು ಈಶಾ ಪೌಂಡೇಷನ್ನ ಆದಿಯೋಗಿ ದ್ಯಾನ ಕೇಂದ್ರದಲ್ಲಿ ಇಂದು (ಆ.21) ಸಂಜೆ 5ಕ್ಕೆ ನಾಗಾರಾಧನೆ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ಆಗಸ್ಟ್ 19ರಿಂದ 21ರವರೆಗೆ ಆಹಾರ, ಆಟಿಕೆ ಮತ್ತು ಕರಕುಶಲ ಮಳಿಗೆಗಳ ಸ್ಥಾಪನೆಯೊಂದಿಗೆ ಹಳ್ಳಿ ಜಾತ್ರೆಯ ಸಂಭ್ರಮ ನಿರ್ಮಾಣ ಕಂಡು ಬಂದಿದ್ದು, ಇಂದು ಸದ್ಗುರು ಸನ್ನಿಧಿಯಲ್ಲಿರುವ ನಾಗ ಮಂಟಪದಲ್ಲಿ ಉಡುಪಿಯ ನಾಗವಾಕ್ಷಿಗಳಿಂದ ನಾಗಾರಾಧನೆ ನಡೆಯಲಿದೆ.
ದೈವಿಕ ನಾಗನನ್ನು ಸಂಭ್ರಮಿಸುವ ಸಂದರ್ಭದಲ್ಲಿ ಸದ್ಗುರುಗಳು ವಿಶೇಷ ಆರತಿ ಅರ್ಪಿಸುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಕ್ತರು ಯೋಗೇಶ್ವರ ಲಿಂಗಕ್ಕೆ ಹಾಲು ಅಭಿಷೇಕ ನೆರವೇರಿಸಬಹುದು. ಅಲ್ಲದೆ ವಿಶೇಷ ಪೂಜೆಗೆ ಅವಕಾಶವನ್ನು ಸಹ ನೀಡಲಾಗಿದೆ.
ಇದು 112 ಅಡಿ ಆದಿಯೋಗಿ ಪ್ರತಿಮೆಯನ್ನು ಉಕ್ಕಿನಿಂದ ಮಾಡಲಾಗಿದ್ದು, ಸುಮಾರು 500 ಟನ್ ತೂಕವಿದೆ. ಇದು 34 ಮೀಟರ್ ಎತ್ತರ, 45 ಮೀಟರ್ ಉದ್ದ ಮತ್ತು 25 ಮೀಟರ್ ಅಗಲವಿದೆ. ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ ಇದು ವಿಶ್ವದ ಅತಿದೊಡ್ಡ ಬೆಸ್ಟ್ ಶಿಲ್ಪವಾಗಿದೆ ಎಂದು ಸಹ ವರ್ಣಿಸಲಾಗಿದೆ.