ಶಿಡ್ಲಘಟ್ಟ: ಪ್ರಿಯಕರನೊಂದಿಗೆ ಸೇರಿ, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿದ್ದ ಪ್ರಕರಣ ಶಿಡ್ಲಘಟ್ಟ ತಾಲೂಕಿನ ಗುಂಜಿಗುಂಟೆ ಗ್ರಾಮದಲ್ಲಿ ನಡೆದಿದೆ.
ಶಿಡ್ಲಘಟ್ಟ ತಾಲೂಕಿನ ಗುಂಜಿಗುಂಟೆ ಗ್ರಾಮದ ಮೆಹರ್ ಮತ್ತು ಪ್ರಿಯಕರ ಬುರುಡಗುಂಟೆಯ ತೌಸಿಫ್ ಬಂಧಿತರಾಗಿದ್ದು, ಇಬ್ಬರೂ ಜೈಲು ಸೇರಿದ್ದಾರೆ.
ಗ್ರಾಮದ ಪರಿಚಿತ ವ್ಯಕ್ತಿ ತೌಸಿಫ್ ಜೊತೆಗೆ ಮೆಹರ್ ಅಕ್ರಮ ಸಂಬಂಧ ಬೆಳೆಸಿದ್ದಳು. ಈ ವಿಚಾರ ತಿಳಿದ ದಾದಾಪೀರ್ ಹಿರಿಯರೊಂದಿಗೆ ಪಂಚಾಯಿತಿ ಮಾಡಿ ಬುದ್ದಿವಾದ ಹೇಳಿಸಿದ್ದಾನೆ. ಗಂಡನಿದ್ದರೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಮೆಹರ್ ಪ್ರಿಯಕರ ತೌಸಿಫ್ ನೊಂದಿಗೆ ಸೇರಿ ಕೋಳಿ ಸುಡುವ ಗನ್ ನಿಂದ ದಾದಾಪೀರ್ ನನ್ನು ಸುಟ್ಟು ಬೆಂಕಿ ತಗುಲಿ ಮೃತಪಟ್ಟಿರುವುದಾಗಿ ಬಿಂಬಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.