ಚಿಕ್ಕಬಳ್ಳಾಪುರ: ಪೊಲೀಸ್ ಪೇದೆಯೊಬ್ಬರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ಎಫ್ ಮಾಜಿ ಕಮಾಂಡೆಂಟ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ ದರೋಡೆಕೋರರು ಪೊಲೀಸರ ಪುತ್ರನನ್ನು ಗಾಯಗೊಳಿಸಿದ್ದರು.
ಉತ್ತರ ಪ್ರದೇಶದ ವೀರೇಂದ್ರ ಸಿಂಗ್ ಠಾಕೂರ್ ದರೋಡೆಯ ಹಿಂದಿನ ಮಾಸ್ಟರ್ ಮೈಂಡ್ ಆಗಿ ಹೊರಹೊಮ್ಮಿದ ಮಾಜಿ ಸೈನಿಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನ ದತ್ತುಪುತ್ರ 25 ವರ್ಷದ ಹೈದರ್ ನನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ಅಂತಾರಾಜ್ಯ ದರೋಡೆಕೋರರ ಗುಂಪು ಹದಿನೈದು ದಿನಗಳ ಹಿಂದೆ ಪೊಲೀಸ್ ಪೇದೆಯ ಮನೆಯನ್ನು ಲೂಟಿ ಮಾಡಿ ಮಗನಿಗೆ ಗುಂಡು ಹಾರಿಸಿತ್ತು.
ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ನಾರಾಯಣ ಸ್ವಾಮಿ ಅವರ ಮನೆಗೆ ನುಗ್ಗಿದ ಗ್ಯಾಂಗ್, ಅವರ ಮಗನಿಗೆ ಗುಂಡು ಹಾರಿಸಿ ಚಿನ್ನಾಭರಣ ಮತ್ತು ನಗದನ್ನು ದೋಚಿದೆ.
ದರೋಡೆಕೋರರು ಎಎಸ್ಐ ನಾರಾಯಣಸ್ವಾಮಿ ಅವರ ಮಗ ಶರತ್ ಮೇಲೆ ಮೂರು ಗುಂಡುಗಳನ್ನು ಹಾರಿಸಿದ್ದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ.