ಚಿಕ್ಕಬಳ್ಳಾಪುರ : ತಂದೆಯನ್ನು ಹೊರಹಾಕಿದ್ದ ಮಗನಿಗೆ ನ್ಯಾಯಾಲಯ ತಕ್ಕ ಶಾಸ್ತಿಯನ್ನು ಮಾಡಿದೆ. ಮಗನನ್ನು ಹೊರಹಾಕುವಂತೆ ಪೋಲಿಸರಿಗೆ ನ್ಯಾಯಾಲಯ ಸೂಚನೆ ಕೊಟ್ಟಿದೆ. ಈ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರದ ಅಂಜನಿ ಬಡಾವಣೆಯಲ್ಲಿ.
ನಿವೃತ್ತ ಪ್ರಾಧ್ಯಾಪಕ ಮುನಿಸ್ವಾಮಿಯನ್ನು ಅವರ ಮಗನು ಮನೆಯಿಂದ ಹೊರಹಾಕಿದ್ದನು. ಮಗ ಎಂ ಸುಭಾಷ್ ಹಾಗೂ ಸೊಸೆ ಮಂಜುಳ ಬಲವಂತವಾಗಿ ಹೊರದಬ್ಬಲಾಗಿತ್ತು. ಈ ಬಗ್ಗೆ ದೂರು ನೀಡಿದ್ದ ಮುನಿಸ್ವಾಮಿ ಎಸಿ ಕೋರ್ಟ್ ಹೈಕೋರ್ಟ್ ನಲ್ಲಿ ಕೇಸನ್ನು ಗೆದ್ದಿದ್ದರು.ಈಗ ಪೋಲಿಸರು ಮಗನನ್ನು ಕೋರ್ಟ್ ಆದೇಶದ ಪ್ರಕಾರ ಮನೆಯಿಂದ ಹೊರ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ತಂದೆಯಾದ ಮುನಿಸ್ವಾಮಿ, ‘ ನನ್ನನ್ನು ನನ್ನ ಮಗನು ಒಂದು ವರ್ಷದ ಹಿಂದೆ ಹೊರ ಹಾಕಿ ಅಕ್ರಮವಾಗಿ ಮನೆಯಿಂದ ಹೊರಹಾಕಿದ್ದನು.ಈ ಬಗ್ಗೆ ನಾನು ಎಲ್ಲಾ ಕೋರ್ಟ್ ಗೆ ಹೋಗಿ ಗೆದ್ದಿದ್ದೇನೆ’ ಎಂದರು.