ಬೆಂಗಳೂರು: ನಾಗಮಂಗಲದಲ್ಲಿ ಪತ್ನಿ ಸುಧಾ ಮೂಲಕ ಶಿವರಾಮೆ ಗೌಡ ರಾಜಕೀಯ

ಬೆಂಗಳೂರು: ದಳಪತಿಗಳ ಭದ್ರಕೋಟೆ ಮಂಡ್ಯ ದಲ್ಲಿ ಚುನಾವಣೆ ರಂಗು ದಿನದಿಂದ ದಿನಕ್ಕೆ ಏರುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿಯೂ ಮಂಡ್ಯದಲ್ಲಿ ತಳವೂರಲು ಹಲವು ವರ್ಷಗಳಿಂದ ಹಲವು ವಿಧಾನದಲ್ಲಿ ಪ್ರಯತ್ನಿಸುತ್ತಿದೆ. ಈ ಹಿಂದೆ ಜೆಡಿಎಸ್‌ ನಲ್ಲಿದ್ದ ನಾರಾಯಣ ಗೌಡ ಅವರನ್ನು ಅಪರೇಶನ್‌ ಕಮಲ ಮೂಲಕ ಸೆಳೆದು ಆ ಭಾಗದಲ್ಲಿ ಪಕ್ಷ ಗಟ್ಟಿಗೊಳಿಸುವ ಯತ್ನ ನಡೆಸಿದೆ.

ಅದೇರೀತಿ ಇತ್ತೀಚೆಗೆ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಬಿಜೆಪಿ ಪಕ್ಷ ವಿಸ್ತರಣೆ ಉದ್ದೇಶದಿಂದಲೇ ಕಾಂಗ್ರೆಸ್‌ ಜೆಡಿಎಸ್‌ ಮುಖಂಡರಿಗೆ ಗಾಳ ಹಾಕುತ್ತಿರುವುದು ಸುಳ್ಳಲ್ಲ. ಮಂಡ್ಯದಲ್ಲಿ ಬಿಜೆಪಿಗೆ ಮೂಲಬೇರು ಗಟ್ಟಿಯಿಲ್ಲದ ಕಾರಣ ವಿವಿಧ ಪಕ್ಷಗಳಿಂದ ಅಧಿಕಾರ ಸಹಿತ ಕಾರಣಗಳಿಗೆ ವಲಸೆ ಬಂದವರೇ ಆಸರೆಯಾಗಿದ್ದಾರೆ. ಪ್ರಸ್ತುತ ಮಂಡ್ಯ ನಾಗಮಂಗಲದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸುಧಾ ಶಿವರಾಮ್‌ ಹಿನ್ನಲೆಯೂ ಹೀಗೆ ಇದೆ. ಜೆಡಿಎಸ್‌ ನಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿದ್ದ ಎಲ್‌. ಆರ್‌. ಶಿವರಾಮೆ ಗೌಡ ತಮ್ಮ ಪತ್ನಿಗೆ ನಾಗಮಂಗಲದಲ್ಲಿ ಟಿಕೇಟ್‌ ಕೊಡಿಸಿ ಚುನಾವಣೆ ರಣಕಣದಲ್ಲಿ ಮುನ್ನುಗ್ಗುತ್ತಿದ್ದಾರೆ.

ಮಂಡ್ಯ ಬಿಜೆಪಿ ಚುನಾವಣ ಕಲಿಗಳ್ಯಾರು: ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಮದ್ದೂರಿನಲ್ಲಿ ಎಸ್‌.ಪಿ ಸ್ವಾಮಿ, ಮಳವಳ್ಳಿ ಪ.ಜಾ ಮೀಸಲು ಕ್ಷೇತ್ರಕ್ಕೆ ಮುನಿರಾಜು, ಮಂಡ್ಯಕ್ಕೆ ಅಶೋಕ್ ಜಯರಾಮ್, ಶ್ರೀರಂಗಪಟ್ಟಣಕ್ಕೆ ಸಚ್ಚಿದಾನಂದ, ಕೆ.ಆರ್ ಪೇಟೆಗೆ ನಾರಾಯಣಗೌಡ, ಮೇಲುಕೋಟೆಗೆ ಡಾ.ಇಂದ್ರೇಶ್ ಕುಮಾರ್ ಮತ್ತು ನಾಗಮಂಗಲಕ್ಕೆ ಸುಧಾ ಶಿವರಾಮ್‌ರವರಿಗೆ ಟಿಕೆಟ್ ನೀಡಲಾಗಿದೆ.

ಪತ್ನಿ ಮೂಲಕ ಶಿವರಾಮೆ ಗೌಡ ರಾಜಕೀಯ: ನಾಗಮಂಗಲ ಬಿಜೆಪಿ ಟಿಕೆಟ್‌ಗಾಗಿ ಫೈಟರ್ ರವಿ ಮತ್ತು ಜೆಡಿಎಸ್‌ನಿಂದ ಉಚ್ಛಾಟನೆಗೊಂಡು ಇತ್ತೀಚೆಗೆ ಬಿಜೆಪಿ ಸೇರಿದ ಎಲ್.ಆರ್ ಶಿವರಾಮೆ ಗೌಡ ಪೈಪೋಟಿ ನಡೆಸಿದ್ದರು. ಆದರೆ ಅವರಿಬ್ಬರನ್ನೂ ಬಿಟ್ಟು ಅಚ್ಚರಿಯ ನಡೆಯಲ್ಲಿ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೆ ಗೌಡಗೆ ಬಿಜೆಪಿ ಟಿಕೆಟ್ ಲಭಿಸಿದೆ. ತುರುವೇಕೆರೆ ಕ್ಷೇತ್ರದಿಂದ ಎರಡು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಎಚ್ ರಾಮಕೃಷ್ಣಯ್ಯ ಪುತ್ರಿಯಾದ ಸುಧಾ ಶಿವರಾಮೆ ಗೌಡರು ಸದ್ಯ ನಾಗಮಂಗಲದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಫೈಟರ್‌ ರವಿಗೆ ನಿರಾಸೆ: ರೌಡಿ ಶೀಟರ್‌ ರವಿ ಅವರು ನಾಗಮಂಗಲ ಟಿಕೇಟ್‌ ಆಕಾಂಕ್ಷಿಯಾಗಿದ್ದು ನಾಗಮಂಗಲ ಕ್ಷೇತ್ರದ ಟಿಕೇಟ್‌ ಪಡೆಯಲು ವರ್ಷದ ಹಿಂದಿನಿಂದಲೇ ಕಸರತ್ತು ನಡೆಸಿದ್ದರು. ಆದರೆ ಇದಕ್ಕೆ ತಡೆಯೊಡ್ಡಿದ್ದು, ಪ್ರಧಾನಿ ನಮಸ್ತೆ ಪೋಟೋಗಳು ವೈರಲ್‌ ಆಗಿದ್ದು, ಮತ್ತು ಕೈ ನಾಯಕರು ಬಿಜೆಪಿಯನ್ನು ಈ ವಿಚಾರದಲ್ಲಿ ಹಿಗ್ಗಾಮುಗ್ಗ ಜಾಡಿಸಿದ್ದು. ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ಫೈಟರ್‌ ರವಿ ಅವರಿಗೆ ಕೈ ಮುಗಿದಿದ್ದು, ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವೇ ಫೈಟರ್‌ಗೆ ಬಿಜೆಪಿ ಟಿಕೇಟ್‌ ಪಡೆಯಲು ಬಹುದೊಡ್ಡ ಅಡ್ಡಿಯಾಯಿತು ಎಂಬ ಮಾತಿದೆ.

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

5 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

5 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

5 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

6 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

7 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

7 hours ago