ಬೆಂಗಳೂರು: ಬಾಲಕಿ ಮೊಬೈಲ್ಗೆ ‘ನನ್ನನ್ನು ಪ್ರೀತಿಸು’ ಎಂದು ಸಂದೇಶ ಕಳುಹಿಸಿದರೆಂಬ ಕಾರಣಕ್ಕೆ ಪ್ರಜ್ವಲ್ (19) ಎಂಬುವರನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ನಾಗೇಂದ್ರ ಮತ್ತು ರಂಗಸ್ವಾಮಿ ಬಂಧಿತರು. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಬನಶಂಕರಿ ನಿವಾಸಿ ಪ್ರಜ್ವಲ್, ಆರೋಪಿ ನಾಗೇಂದ್ರನ ಅಣ್ಣನ ಮಗಳಿಗೆ ಸಂದೇಶ ಕಳುಹಿಸಿದ್ದ. ಇದರಿಂದ ಸಿಟ್ಟಾದ ನಾಗೇಂದ್ರ, ತನ್ನ ಸ್ನೇಹಿತರ ಜೊತೆ ಸೇರಿ ‘ಪ್ರಜ್ವಲ್ ಅವರನ್ನು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಜುಲೈ 15ರಂದು ಕರೆಸಿಕೊಂಡಿದ್ದರು. ಪ್ರಜ್ವಲ್ ಗೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಪ್ರಜ್ವಲ್ ಅವರನ್ನು ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಪ್ರಜ್ವಲ್ ಮೃತಪಟ್ಟಿರುವುದಾಗಿ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.