ಬೆಂಗಳೂರು: ಬೆಳಿಗ್ಗೆ ಎದ್ದು ಮೊದಲು ನರಿಯನ್ನು ನೋಡಿದರೆ, ಅದೃಷ್ಟದ ದಿನವಾಗಿರುತ್ತದೆ ಎಂಬ ನಂಬಿಕೆಯಿದೆ. ಅದೇ ಕಾರಣಕ್ಕಾಗಿ ಅನೇಕ ಜನರು ತಮ್ಮ ಮಲಗುವ ಕೋಣೆಗಳಲ್ಲಿ ನರಿ ಫೋಟೋಗಳನ್ನು ಇಡುತ್ತಾರೆ. ಅಂತಹುದೇ ಘಟನೆ ತುಮಕೂರು ಹೆಬ್ಬೂರು ಹೋಬಳಿಯಲ್ಲಿ ನಡೆದಿದೆ.
ಅದೃಷ್ಟಕ್ಕಾಗಿ ಕೋಳಿ ಫಾರಂನಲ್ಲಿ ನರಿ ಸಾಕಿದ ಯುವಕನನ್ನು ತುಮಕೂರಿನಲ್ಲಿ ಸಿಐಡಿ ಅರಣ್ಯ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ಲಕ್ಷ್ಮೀಕಾಂತ್ ಬಂಧಿತ ಯುವಕ. ಲಕ್ಷ್ಮೀಕಾಂತ್ ಕೋಳಿ ಫಾರಂ ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ತನ್ನ ಗ್ರಾಮದ ಕೆರೆಯಲ್ಲಿ ನರಿ ಮರಿ ಪತ್ತೆಯಾಗಿತ್ತು. ಅದರ ಮುಖ ನೋಡಿದರೆ ಅದೃಷ್ಟ ಬರುತ್ತದೆ ಎಂಬ ಆಸೆಯಿಂದ ಅದನ್ನು ರಕ್ಷಿಸಿ ಜಮೀನಿನಲ್ಲಿಟ್ಟಿದ್ದರು.
ಈ ಬಗ್ಗೆ ತಿಳಿದ ಅಧಿಕಾರಿಗಳು ಜಮೀನಿನಲ್ಲಿ ದಾಳಿ ನಡೆಸಿ ಈಗ ಆರೋಪಿಗಳನ್ನು ಬಂಧಿಸಿದ್ದಾರೆ. ನರಿಯನ್ನು ಈಗ ರಕ್ಷಿಸಲಾಗಿದೆ.