News Karnataka Kannada
Thursday, May 09 2024
ಬೆಂಗಳೂರು ನಗರ

ಬೆಂಗಳೂರು: ಮರಾಠ ಸಮಾಜಕ್ಕೆ ರಾಜ್ಯ ಸರಕಾರ ಜಮೀನು ಮಂಜೂರು!

Bengaluru: The budget session will be held from February 10 to 24.
Photo Credit : By Author

ಬೆಂಗಳೂರು: ತೀರ್ಥಹಳ್ಳಿ ಕ್ಷತ್ರಿಯ ಮರಾಠ ಸಮಾಜಕ್ಕೆ ರಾಜ್ಯ ಸರಕಾರ ಒಂದು ಎಕರೆ ಜಮೀನನ್ನು ಮಂಜೂರು ಮಾಡಿದ್ದು, ಬಹು ಕಾಲದ ಬೇಡಿಕೆಯನ್ನು, ಮಾನ್ಯ ಮಾಡಿ ಆದೇಶ ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರಕಾರ, ಕೆಲವು ಶರತ್ತುಗಳನ್ನು ವಿಧಿಸಿ ಮಂಜೂರು ಆದ ಜಮೀನನ್ನು ಸಾರ್ವಜನಿಕ ಸಮುದಾಯ ಭವನ ನಿರ್ಮಿಸಲು ಉಪಯೋಗಿಸಬೇಕು, ಎಂದು ತಿಳಿಸಿದೆ.

ತೀರ್ಥಹಳ್ಳಿ ತಾಲೂಕು ಕ್ಷತ್ರಿಯ ಮರಾಠ ಸಮಾಜಕ್ಕೆ ನಿವೇಶನ ಒದಗಿಸಬೇಕೆಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರಿಗೆ ಮರಾಠ ಮುಖಂಡರು ಮನವಿ ಸಲ್ಲಿಸಿದ್ದರು.

ತಾಲೂಕಿನ, ಸುರುಳೆ ಬಾಳೇಬೈಲು ಗ್ರಾಮದಲ್ಲಿ, ಜಾಗವನ್ನು ಗುರುತಿಸಿದ್ದು, ಮರಾಠ ಸಮಾಜವು ಸದರಿ ಭೂಮಿಯನ್ನು, ಸಮುದಾಯ ಭವನವನ್ನು ನಿರ್ಮಿಸಿ, ವಿವಾಹ ಹಾಗೂ ಇತರ ಸಮಾರಂಭ ಗಳನ್ನು ಆಯೋಜಿಸಿ, ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ.

ಮರಾಠ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು, ಭೂಮಿ ಮಂಜೂರು ಮಾಡಿಸಲು ಶ್ರಮಿಸಿದ, ತೀರ್ಥಹಳ್ಳಿ ಶಾಸಕರೂ, ರಾಜ್ಯ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರಿಗೆ, ಸಮಾಜದ ಸದಸ್ಯರು, ಕೃತಜ್ಞತೆ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು