ಬೆಂಗಳೂರು: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಸರ್ಕಾರದ ವಿರುದ್ಧ ನಗರದ ಸ್ವತಂತ್ರ ಉದ್ಯಾನವನದಲ್ಲಿ ಇಂದು(ಅ.25) ಪ್ರತಿಭಟನೆ ನಡೆಯಿತು.
ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ ಬುಧುವಾರ ಸ್ವತಂತ್ರ ಉದ್ಯಾನವನದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( K E A ) ನಿರ್ಣಯವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಕಾರ್ಯಕರ್ತರು, ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳ ಪ್ರವೇಶದ ವಿಚಾರದಲ್ಲಿ ಈ ಹಿಂದೆ ಸಾಕಷ್ಟು ಗಲಾಟೆ ಗದ್ದಲಗಳಾಗಿದೆ ಅದರ ಹೊರತಾಗಿಯೂ ಇದೇ ತಿಂಗಳು ಅಂದರೆ ಅಕ್ಟೊಬರ್ ೨೮ ಮತ್ತು ೨೯ ರಂದು ವಿವಿಧ ನಿಗಮ ಮಂಡಳಿಗಳ ಭರ್ತಿಗೆ ನಡೆಯುವ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಹಾಜರಾಗಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿರುವುದು ಅಕ್ಷಮ್ಯ .
ಉಚ್ಚ ನ್ಯಾಯಾಲಯಕ್ಕೂ ಅಗೌರವ ತೋರಿಸುತ್ತಿರುವ ಸರಕಾರ:
ಬಾರೀ ಸಂಘರ್ಷಕ್ಕೆ ಕಾರಣವಾಗಿದ್ದ ಹಿಜಾಬ್ ವಿಚಾರದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿ ಶಾಲಾ ಕಾಲೇಜುಗಳಲ್ಲಿ ಅಲ್ಲಿಯ ಸಮವಸ್ತ್ರ ಬಳಕೆ ಮಾಡುವಂತೆ ಆದೇಶಿಸಿ ಹಿಜಾಬ್ ಗೆ ನಿರ್ಬಂಧ ಹೇರಿತ್ತು . ಇದರ ಹೊರತಾಗಿಯೂ ಹಿಜಾಬ್ ಗೆ ಅವಕಾಶ ಕಲ್ಪಿಸುತ್ತಿರುವುದು ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿಗೂ ಅಗೌರವ ಅಪಮಾನ ತೋರಿದಂತೆ ಆಗುತ್ತದೆ . ಅಲ್ಲದೆ ಇಂತಹ ನಿರ್ಣಯಗಳ ಮೂಲಕ ಸರಕಾರ ಅಲ್ಪ ಸಂಖ್ಯಾತರ ಓಲೈಕೆ ಮಾಡುತ್ತಿದೆಯಾ ? ಎಂಬ ಅನುಮಾನಕ್ಕೂ ದಾರಿಮಾಡಿ ಕೊಟ್ಟಂತೆ ಅನುಮಾನ ಮೂಡಿಸುತ್ತದೆ. ಹಾಗಾಗಿ ತಕ್ಷಣ ಪ್ರಾಧಿಕಾರವು ಈ ಆದೇಶವನ್ನು ಹಿಂಪಡೆಯಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.