ಬೆಂಗಳೂರು: ಮೈಸೂರು -ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆಗಾಗಿ ಭಾನುವಾರ 11ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಬಂದಿಳಿಯಲಿದ್ದು, ನಂತರ ಮಂಡ್ಯಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸುವರು. ನಂತರ ಅಲ್ಲಿನ ಅಮರಾವತಿ ಜಂಕ್ಷನ್ ಬಳಿ ರಸ್ತೆ ಉದ್ಘಾಟನೆ ನಡೆಸುವರು. ಬಳಿಕ ಗೆಜ್ಜಲಗೆರೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುವರು.
ಹೆದ್ದಾರಿ ಬಂದ್: ಮೋದಿ ಭೇಟಿ ಹಿನ್ನಲೆಯಲ್ಲಿ ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ ಬೆಳಗ್ಗೆ 7ಗಂಟೆಯಿಂದ ಬಂದ್ ಆಗಲಿದ್ದು, ತುರ್ತುವಾಹನಗಳು, ಹಾಲು ತರಕಾರಿ ವಾಹನ ಮೊದಲಾದ ಅಗತ್ಯ ವಸ್ತು ಸಾಗಣೆಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಬೆಳಗ್ಗೆ 9ರವರೆಗೆ ಇತರ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಾಗಬೇಕಿದೆ. ಬಳಿಕ ಸರ್ವಿಸ್ ರಸ್ತೆ ಕೂಡ ಬಂದ್ ಆಗಲಿದೆ.
ಪರ್ಯಾಯ ಮಾರ್ಗ ಹೀಗಿದೆ: ಮೈಸೂರಿನಿಂದ ಬೆಂಗಳೂರಿಗೆ ಸಾಗುವವರು ರಾಮನಗರ ಚೆನ್ನಪಟ್ಟಣ, ಕಿರುಗಾವಲು ಮೈಸೂರು ಮಾರ್ಗವಾಗಿ ತೆರಳಬೇಕಿದೆ.