ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಲೋಕಾಯುಕ್ತ ದಾಳಿ ನಡೆದಿದೆ. ಯಶವಂತಪುರ, ಜಯನಗರ, ಇಂದಿರಾನಗರ, ಜ್ಞಾನಭಾರತಿ ಕಚೇರಿ ಸೇರಿದಂತೆ ನಗರದ ಎಲ್ಲಾ ಆರ್ಟಿಒ ಕಚೇರಿಗಳ ಮೇಲೆ ಬುಧವಾರ ಲೋಕಾಯುಕ್ತ ದಾಳಿ ಮಾಡಲಾಗಿದೆ.
ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ನೇತೃತ್ವದಲ್ಲಿ ದಾಳಿ ಮಾಡಿದ್ದು, ಎಲ್ಲಾ ಆರ್ಟಿಒ ಕಚೇರಿಗಳಲ್ಲಿ ಕಡತ ಪರಿಶೀಲಿಸಿದ್ದಾರೆ. ಜಯನಗರದ ಆರ್ಟಿಒ ಕಚೇರಿಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ ನೀಡಿದ್ದು, ಆರ್ಟಿಒ ಸುರೇಶ್ ಕಚೇರಿಯಲ್ಲಿ ಕುಳಿತು ದಾಳಿಯ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.