ಆನೇಕಲ್: ಮೊನ್ನೆ ಮೊನ್ನೆಯಷ್ಟೇ ಬನ್ನೇರುಘಟ್ಟ ಉದ್ಯಾನವನದಲ್ಲಿ ಹಲವು ಪ್ರಾಣಿಗಳು ಸಾವನ್ನಪ್ಪಿದ್ದು ಸುದ್ದಿಯಾಗಿತ್ತು. ಇದೀಗ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ʻರಾಮʼ ಹೆಸರಿನ ಸಿಂಹವೊಂದು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಡೆದಿದೆ.
14 ವರ್ಷ ವಯಸ್ಸಿನ ರಾಮ ಎಂಬ ಹೆಸರಿನ ಸಿಂಹ ಕೊನೆಯುಸಿರೆಳೆದಿದೆ. 2010ರಲ್ಲಿ ಸಿಂಹ ಗಣೇಶ ಮತ್ತು ಸಿಂಹಿಣಿ ಅನುಗೆ ಜನಿಸಿದ ಸಿಂಹವಾಗಿದ್ದು, ಅಂದಿನಿಂದ ಬನ್ನೇರುಘಟ್ಟದ ಜೈವಿಕ ಉದ್ಯಾನದಲ್ಲಿತ್ತು. ಬುಧವಾರ ಬೆಳಗ್ಗೆ ಸಿಂಹಕ್ಕೆ ಇದ್ದಕ್ಕಿದ್ದಂತೆ ವಾಂತಿಯ ಲಕ್ಷಣಗಳು ಕಾಣಿಸಿಕೊಂಡು ನಿಶ್ಯಕ್ತಿಯಿಂದ ಬಳಲುತ್ತಿತ್ತು. ಕೂಡಲೇ ಬನ್ನೇರುಘಟ್ಟ ಪಶುವೈದ್ಯರ ತಂಡ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿತ್ತು. ಆದ್ರೆ ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ (ನ.16) ಸಾವನ್ನಪ್ಪಿದೆ