ಬೆಂಗಳೂರು, ಜ.18: ದ್ವಿಚಕ್ರ ವಾಹನ ಸವಾರನೊಬ್ಬ 71 ವರ್ಷದ ಮುತ್ತಪ್ಪ ಶಿವಯೋಗಿ ತೋಂಟಾಪುರ ಅವರನ್ನು, ಅರ್ಧ ಕಿಲೋಮೀಟರ್ ಗೂ ಹೆಚ್ಚು ದೂರ ಎಳೆದೊಯ್ದುಕೊಂಡಿದ್ದಾನೆ. ಸಾರ್ವಜನಿಕರು ಸಕಾಲದಲ್ಲಿ ಮಧ್ಯಪ್ರವೇಶಿಸದೇ ಹೋಗಿದ್ದರೆ ತಾನು ಸಾಯುತ್ತಿದ್ದೆ ಎಂದು ಬುಧವಾರ ಮುತ್ತಪ್ಪ ಶಿವಯೋಗಿ ಹೇಳಿದ್ದಾರೆ.
ಆತೋಂಟಾಪುರ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ಹೇಳುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಗೋವಿಂದರಾಜನಗರ ಪೊಲೀಸರು ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿ ಸಾಹಿಲ್ ವಿರುದ್ಧ ಎರಡು ಎಫ್ಐಆರ್ ದಾಖಲಿಸಲಾಗಿದೆ ಎಂದು ಪಶ್ಚಿಮ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಹೇಳಿದ್ದಾರೆ. ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಆರೋಪಿಗಳ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದಂತೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಪೊಲೀಸರು ಐಪಿಸಿ ಸೆಕ್ಷನ್ 337, 338 ಮತ್ತು 307 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಸಾಹಿಲ್ ನನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳವಾರ ಈ ಘಟನೆ ನಡೆದಾಗ ತಾನು ಬೊಲೆರೊ ವಾಹನವನ್ನು ನಿಲ್ಲಿಸಿ ಫೋನ್ ಕರೆಗೆ ಉತ್ತರಿಸುತ್ತಿದ್ದೆ ಎಂದು ಮುತ್ತಪ್ಪ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಆರೋಪಿಗಳು ಬಿಳಿ ಸ್ಕೂಟರ್ ನಲ್ಲಿ ಅಲ್ಲಿಗೆ ಬಂದು, ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. “ನಾನು ಅವನ ಸ್ಕೂಟರ್ ಹ್ಯಾಂಡಲ್ ಅನ್ನು ಹಿಡಿದೆ. ನನ್ನನ್ನು ಎಳೆದೊಯ್ಯಲಾಗುತ್ತಿದೆ ಎಂದು ಚೆನ್ನಾಗಿ ತಿಳಿದಿದ್ದ ಆರೋಪಿ ತನ್ನ ವಾಹನದ ವೇಗವನ್ನು ಹೆಚ್ಚಿಸಿದ್ದಾನೆ” ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ವಾಹನವನ್ನು ನಿಲ್ಲಿಸುವಂತೆ ಮುತ್ತಪ್ಪ ಸವಾರನಿಗೆ ಮನವಿ ಮಾಡಿದ್ದಾಗಿ ಹೇಳಿದ್ದಾರೆ. “ಅವರು ನನ್ನ ಮನವಿಗಳಿಗೆ ಕಿವಿಗೊಡಲಿಲ್ಲ ಮತ್ತು ನನ್ನನ್ನು ರಸ್ತೆಯಲ್ಲಿ ಎಳೆಯುವುದನ್ನು ಮುಂದುವರೆಸಿದರು. ಇದನ್ನು ನೋಡಿದ ಪ್ರೇಕ್ಷಕರು, ಅವರನ್ನು ತಡೆದು ನನ್ನನ್ನು ರಕ್ಷಿಸಿದರು” ಎಂದು ಮುತ್ತಪ್ಪ ಅವರು ಹೇಳಿದರು.
ಮುತ್ತಪ್ಪ ಅವರಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ಮುತ್ತಪ್ಪ ಅವರ ಭಯಾನಕ ವಿಡಿಯೋ ವೈರಲ್ ಆಗಿದೆ.