ನಾಳೆಯಿಂದ 2,000 ರೂ. ನೋಟು ಬದಲಾವಣೆಗೆ ಅವಕಾಶ

ಬೆಂಗಳೂರು: ಖೋಟಾ ನೋಟು ಮತ್ತು ಕಪ್ಪು ಹಣದ ನಿರ್ಮೂಲನೆಗಾಗಿ ಕೇಂದ್ರ ಸರಕಾರ 2016ರಲ್ಲಿ ಘೋಷಿಸಿದ್ದ ರೂ. 2,000 ನೋಟು ವಾಪಸ್ ಆಗಿರುವ ಬೆನ್ನಲ್ಲೇ ಬದಲಾವಣೆಗೆ ಸೋಮವಾರದಿಂದ ಅವಕಾಶ ನೀಡಲಾಗಿದೆ.

ಜನರು ತಮ್ಮ ನೋಟುಗಳನ್ನು ಬ್ಯಾಂಕ್‌ಗಳಿಗೆ ಹೋಗಿ ಬದಲಾಯಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದು ನಿಗದಿತ ರಿಕ್ವೆಸ್ಟ್ ಫಾರ್ಮ್ ಬಿಡುಗಡೆ ಮಾಡಿದೆ. ಅದನ್ನು ಭರ್ತಿ ಮಾಡಿ ಬ್ಯಾಂಕಿಗೆ ಸಲ್ಲಿಸುವ ಮೂಲಕ ನೋಟುಗಳ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಬ್ಯಾಂಕ್‌ಗಳಿಗೆ ತೆರಳಿ ವಿನಿಯಮ ಮಾಡಿಕೊಳ್ಳುವವರಿಗೆ ಮಾತ್ರ ಈ ಅವಕಾಶ ಅನ್ವಯವಾಗಲಿದೆ.

ರೂ. 2,000 ನೋಟುವಿನಿಮಯ ಫಾರ್ಮ್‌ ನಲ್ಲಿ ನೋಟುಗಳನ್ನು ಜಮೆ ಮಾಡುವ ಬ್ಯಾಂಕ್ ಹಾಗೂ ಶಾಖೆಯ ಹೆಸರನ್ನು ಬರೆಯಬೇಕು. ತಮ್ಮ ಸನಿಹದ ಯಾವುದಾದರೂ ಬ್ಯಾಂಕ್‌ಗೆ ಹೋಗಿ ನೋಟು ವಿನಿಮಯ ಮಾಡಿಕೊಳ್ಳಬಹುದು.
ನಂತರ ಖಾತೆದಾರರು ತಮ್ಮ ಖಾತೆ ಯಾವುದೇ ಬ್ಯಾಂಕ್‌ನಲ್ಲಿದ್ದರೂ ನಮೂದಿಸಬೇಕು.

ಖಾತೆದಾರರು ತಮ್ಮ ಖಾತೆಯನ್ನು ಸಂಪೂರ್ಣ ಹೆಸರನ್ನು ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯಬೇಕು. ಆರು ನಿರ್ದಿಷ್ಟ ಐಡಿ ಪ್ರೂಫ್ ನಿಗದಿಪಡಿಸಿದ್ದು ಅದರಲ್ಲಿ ಐಡಿ ಪ್ರೂಫ್ ನೀಡುತ್ತಿದ್ದೇವೆ ಎಂಬುದನ್ನು ಅಲ್ಲಿರುವ ಬಾಕ್ಸ್‌ ನಲ್ಲಿ ಟಿಕ್ ಮಾರ್ಕ್ ಮಾಡಬೇಕು. ಉದಾಹರಣೆಗೆ ಡಿಎಲ್, ಆಧಾರ್ ಕಾರ್ಡ್, ವೋಟರ್ ಐಡಿ, ನರೇಗಾ, ಪಾಸ್ ಪೋರ್ಟ್.

ಐಡಿ ಪ್ರೂಫ್ ನ ನಂಬರ್ ಅನ್ನು ಫಾರ್ಮ್ ನಲ್ಲಿ ದಾಖಲಿಸಬೇಕು. ಟಿಕ್ ಮಾಡಿದ ಐಡಿ ಪ್ರೂಫ್ ಅನ್ನು ಕೌಂಟರ್‌ನಲ್ಲಿ ತೋರಿಸಬೇಕು.

ರೂ. 2,000 ರೂ. ನೋಟಿನ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ? ಅದರ ಮೌಲ್ಯ ಎಷ್ಟು ಎಂಬುದನ್ನು ಬರೆಯಬೇಕು. ಫಾರ್ಮ್ ಗೆ ಸಹಿ ಹಾಕಬೇಕು.

ಸ್ಥಳ ಹಾಗೂ ದಿನಾಂಕ ಬರೆದು ಬ್ಯಾಂಕ್ ಸಿಬ್ಬಂದಿಗೆ ನೀಡಬೇಕು. ಬಳಿಕ ನೋಟಿನ ಮೌಲ್ಯವನ್ನು ಬ್ಯಾಂಕ್ ಸಿಬ್ಬಂದಿ ಎಣಿಸಿ ಬದಲಿ ನೋಟನ್ನು ನೀಡುತ್ತಾರೆ.

Gayathri SG

Recent Posts

ಮೂಕ ಮಗುವನ್ನು ಕಾಲುವೆಗೆ ಎಸೆದ ತಾಯಿ : ಮೊಸಳೆ ಬಾಯಲ್ಲಿತ್ತು ಮೃತದೇಹ

ಗಂಡನ ಮೇಲಿನ ಸಿಟ್ಟಿಗೆ ಹೆತ್ತ ಮಗು ಎಂದು ಯೋಚಿಸದೆ ಮಗುವನ್ನು ನಾಲೆಗೆ ಎಸದು ಬಂದಿರುವ ದಾರಣ ಘಟನೆ ಉತ್ತರ ಕನ್ನಡ…

16 mins ago

ಶಬರಿಮಲೆಯಲ್ಲಿ ಮಂಡಲ, ಮಕರ ಮಹೋತ್ಸವಕ್ಕೆ ಆನ್ಲೈನ್ ಮುಂಗಡ ಬುಕ್ಕಿಂಗ್ ಕಡ್ಡಾಯ

ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಹಾಗೂ ಮಕರ ಮಹೋತ್ಸವ ಋತುವಿನಲ್ಲಿ ಇನ್ನು ದರ್ಶನಕ್ಕೆ…

16 mins ago

ಮೊಬೈಲ್‌ ಬಳಕೆ ಕಡಿಮೆ ಮಾಡು ಎಂದಿದಕ್ಕೆ ಅಣ್ಣನನ್ನೇ ಕೊಂದ ತಂಗಿ

ಮೊಬೈಲ್‌ ಬಳಕೆ ಕಡಿಮೆ ಮಾಡು ಎಂದು ತಿಳಿಹೇಳಿದಕ್ಕೆ ತಂಗಿಯೊಬ್ಬಳು ಅಣ್ಣನನ್ನು ಹತ್ಯೆ ಮಾಡಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. 14 ವರ್ಷದ…

40 mins ago

ಇಂದು ಸಂಜೆ ಅಯೋಧ್ಯೆಗೆ ಮೋದಿ ಭೇಟಿ; ರಾಮಲಲ್ಲಾನ ದರ್ಶನ, ರೋಡ್ ಶೋ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ರಾಮಲಲ್ಲಾನ ದರ್ಶನ ಪಡೆದು ಬಳಿಕ ರೋಡ್​ ಶೋ…

44 mins ago

ದಾಖಲೆಗಳ ಸರದಾರ ಕೊಹ್ಲಿ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆ

ಐಪಿಎಲ್​ನ 52ನೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಹೊಸ ಮೈಲುಗಲ್ಲು ದಾಟಿದ್ದಾರೆ. ಈ ಮೂಲಕ ಈ ಸಾಧನೆ…

59 mins ago

ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ ಕಾರು ಭೀಕರ ಅಪಘಾತ : ಆಸ್ಪತ್ರಗೆ ದಾಖಲು

ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿಯ ಕಾರು ಅಪಘಾತಕ್ಕೊಳಗಾಗಿದೆ. ಅಪಘಾತದಲ್ಲಿ ಶಿವಕುಮಾರ ಸ್ವಾಮೀಜಿಗೆ ಗಾಯಗಳಾಗಿದ್ದು, ಆ್ಯಂಬುಲೆನ್ಸ್ ಮೂಲಕ ಸ್ವಾಮೀಜಿಯನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

1 hour ago