ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪ್ರಸ್ತುತವಾಗಿ ಉಳಿಯಲು ಹೆಣಗಾಡುತ್ತಿರುವ ಜೆಡಿಎಸ್ಗೆ ದೊಡ್ಡ ಉತ್ತೇಜನ ನೀಡಿದ್ದು, ಪಕ್ಷದ ಅತೃಪ್ತ ನಾಯಕ ಜಿಟಿ ದೇವೇಗೌಡ ಅವರು ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
ಪಕ್ಷದ ಮತ್ತೋರ್ವ ಮುಖಂಡ ಎಸ್ಆರ್ ಮಹೇಶ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಗೌಡರು ಈ ಕುರಿತು ನಿರ್ಧಾರ ಪ್ರಕಟಿಸಿದ್ದಾರೆ.
ಜಿಟಿಡಿ ಚಾಮುಂಡೇಶ್ವರಿ ಶಾಸಕರಾಗಿದ್ದು, 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.
ಮಾಜಿ ಸಚಿವ ಹಾಗೂ ಕೆ.ಆರ್.ನಗರ ಶಾಸಕ, ಮೈಸೂರಿನ ಮತ್ತೋರ್ವ ಪಕ್ಷದ ಮುಖಂಡ ಎಸ್.ಆರ್.ಮಹೇಶ್ ಅವರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಅವರು ಪಕ್ಷವನ್ನು ತೊರೆಯುವುದಾಗಿ ಘೋಷಿಸಿದರು.
ಮೂಲಗಳ ಪ್ರಕಾರ, ಜಿಟಿಡಿ ಅವರಿಗೆ ಹುಣಸೂರು ಟಿಕೆಟ್ ಜೊತೆಗೆ ಅವರ ಮಗ ಜಿಡಿ ಹರೀಶ್ ಅವರಿಗೆ ಚಾಮುಂಡೇಶ್ವರಿ ಟಿಕೆಟ್ ನೀಡಲಾಗಿದೆ. ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಪಕ್ಷ ನಿರ್ಧರಿಸಿದೆ.