ಬೆಂಗಳೂರು: ಬೈಂದೂರು ಮೂಲದ ಬೆಂಗಳೂರಿನ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ಸಂಬಂಧ ಮತ್ತಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಹೆಜ್ಜೆ ಹಜ್ಜೆಗೂ ಈ ಚೈತ್ರಾ ಆ್ಯಂಡ್ ಗ್ಯಾಂಗ್ ಡ್ರಾಮಾ ಮಾಡಿರುವ ಸಂಗತಿಗಳು ಹೊರಗೆ ಬರುತ್ತಿವೆ. ಸಿಸಿಬಿ ಕೈಯಲ್ಲಿ ಲಾಕ್ ಆದ್ಮೇಲೂ ಚೈತ್ರಾ ನಾಟಕ ಮುಂದುವರೆಸಿದ್ದು, ನಿನ್ನೆ ಏನೆನೋ ಮಾಡಿ ಆಸ್ಪತ್ರೆ ಸೇರಿದ್ದರು. ಇಂದು ವಿಕ್ಟೋರಿಯಾ ಆಸ್ಪತ್ರೆ ಐಸಿಯುನಲ್ಲಿ ಚೈತ್ರಾಗೆ ಚಿಕಿತ್ಸೆ ಮುಂದುವರೆದಿದ್ದು, ಎಂಆರ್ಐ ರಿಪೋರ್ಟ್ ನಾರ್ಮಲ್ ಆಗಿದೆ. ಎಲ್ಲವೂ ನಾರ್ಮಲ್ ಎಂದು ವರದಿ ಬಂದರೆ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಬೆಳಗ್ಗೆ ವೈದ್ಯರು ಹೇಳಿದ್ದರು.
ಟ್ರಾಮಾ ಕೇರ್ ಸೆಂಟರ್ ವೈದ್ಯಕೀಯ ಅಧೀಕ್ಷಕ ಡಾ.ಬಾಲಾಜಿ ಪೈ ಹೇಳಿಕೆ ನೀಡಿದ್ದು, ಚೈತ್ರಾ ಕುಂದಾಪುರ ಆರೋಗ್ಯದಲ್ಲಿ ಇನ್ನೂ ಸುಧಾರಣೆ ಆಗಬೇಕಾಗಿದೆ. ಅವರು ಇನ್ನೂ ನಿತ್ರಾಣವಸ್ಥೆಯಲ್ಲೇ ಇರುವುದರಿಂದ ಚಿಕಿತ್ಸೆ ಮುಂದುವರಿದಿದೆ. ಚೇತರಿಕೆ ಕಂಡ ಮೇಲೆ ನಾಳೆ ಅಥವಾ ನಾಡಿದ್ದು ವಾರ್ಡ್ಗೆ ಸ್ಥಳಾಂತರಿಸುತ್ತೇವೆ. ಆರೋಪಿ ಚೈತ್ರಾ ಕುಂದಾಪುರ ಡಿಸ್ಚಾರ್ಜ್ ಬಗ್ಗೆ ವೈದ್ಯರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.