ಬೆಂಗಳೂರು: ರಾಜ್ಯ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಬೆಂಗಳೂರಿನ ವಿಜಯನಗರದ ಸಮಾಜ ಸಂಪರ್ಕ ವೇದಿಕೆ ಸಭಾಂಗಣದಲ್ಲಿ ನಡೆಯಿತು.
ರಾಜ್ಯಾಧ್ಯಕ್ಷರಾಗಿ ರಾಮನಗರ ಜಿಲ್ಲೆಯ ಜಿ. ಮಹದೇವಯ್ಯ, ಉಪಾಧ್ಯಕ್ಷರಾಗಿ ಬಾಗಲಕೊಟೆ ಜಿಲ್ಲೆಯ ಬಸವರಾಜು ಸಂಕಪ್ಪ ಅಂಬಿಗೆರೆ, ಪ್ರಧಾನ ಕಾರ್ಯದರ್ಶಿಯಾಗಿ ಹಾಸನ ಜಿಲ್ಲೆಯ ಅನುಗನಾಳು ಕೃಷ್ಣಮೂರ್ತಿ, ಖಜಾಂಚಿಯಾಗಿ ವಿಜಯಪುರ ಜಿಲ್ಲೆಯ ಶಿವಾನಂದ ಸಿದ್ದರಾಮಯ್ಯ ಜಂಗಿನಮಠ, ಸಹಕಾರ್ಯದರ್ಶಿಯಾಗಿ ಬೆಂಗಳೂರು ನಗರದ ಶ್ರೀಮತಿ ಉಮಾದೇವಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕೊಪ್ಪಳ ಜಿಲ್ಲೆಯ ಮಂಜುನಾಥ್ ಪೂಜಾರ್, ಶಿವಮೊಗ್ಗ ಜಿಲ್ಲೆಯ ಮಹಮದ್ ಸಾದಿಕ್, ಕೋಲಾರ ಜಿಲ್ಲೆಯ ಚಿಕ್ಕ ಅಯ್ಯೂರ್ ಮಲ್ಲಿಕಾರ್ಜುನಯ್ಯ, ಉಡುಪಿ ಜಿಲ್ಲೆಯ ಪಿ. ಜಯರಾಂ, ಚಿತ್ರದುರ್ಗ ಜಿಲ್ಲೆಯ ಕೆ. ವೀರಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿ.ಜೆ. ಶಂಕರಪ್ಪ, ಇವರುಗಳು ಶ್ರೀ ಧನ್ವಂತರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪರಿಷತ್ತಿನ ಸಂಸ್ಥಾಪಕರು ಹಾಗೂ ಗೌರವ ಕಾರ್ಯಾಧ್ಯಕ್ಷರಾದ ಗಾ.ನಂ ಶ್ರೀಕಂಠಯ್ಯನವರು ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು.
ಅಧಿಕಾರ ಹಸ್ತಾಂತರವನ್ನು ಪರಿಷತ್ತಿನ ಹಿಂದಿನ ರಾಜ್ಯಾಧ್ಯಕ್ಷರಾಗಿದ್ದ ನೇರ್ಲಿಗೆ ಗುರುಸಿದ್ದಪ್ಪನವರು ನೂತನ ಅಧ್ಯಕ್ಷರಿಗೆ ಹಾಗೂ ಹಿಂದಿನ ಕಾರ್ಯದರ್ಶಿಯಾಗಿದ್ದ ಸುಬ್ರಮಣ್ಯ ಅವರು ನೂತನ ಕಾರ್ಯದರ್ಶಿಯವರಿಗೆ ಅಧಿಕಾರ ಹಸ್ತಾಂತರಿಸಿದರು.
ಪರಿಷತ್ತಿನ ಸಂಸ್ಥಾಪಕರು ಹಾಗೂ ಗೌರವ ಕಾರ್ಯದರ್ಶಿಗಳಾದ ಹರಿರಾಮ್ಮೂರ್ತಿಯವರು ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಸಂಚಾಲಕರಾದ ವಿ.ಸಿ. ಸುರೇಶ್ಕುಮಾರ್, ವಿಜಯನಗರ ಜಿಲ್ಲಾ ಸಂಚಾಲಕರಾದ ಎಂ ಸೂರಣ್ಣ ಹಾಗೂ ಇತರೆ ಜಿಲ್ಲೆಯ ಜಿಲ್ಲಾ ಸಂಚಾಲಕರು ಇದ್ದರು.