3 ನೇ ಅಲೆಯಲ್ಲಿ ಕೊವಿಡ್ ಪ್ರಕರಣ ಎರಡೇ ದಿನಕ್ಕೆ ಡಬಲ್ ಆಗುತ್ತಿದೆ; ಡಾ.ಸುಧಾಕರ್

ಬೆಂಗಳೂರು : ಕೋವಿಡ್ ಮೊದಲನೆ ಅಲೆಯಲ್ಲಿ ಡಬ್ಲಿಂಗ್ ರೇಟ್ 10-12 ದಿನಕ್ಕೆ ಆಗುತ್ತಿತ್ತು, ಎರಡನೇ ಅಲೆಯಲ್ಲಿ 8 ದಿನಕ್ಕೆ ಆದರೆ 3 ನೇ ಅಲೆಯಲ್ಲಿ ಎರಡು ದಿನದಲ್ಲಿ ಡಬಲ್ ಆಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಗುರುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರಾನ್ ಬಂದ ಮೇಲೆ, 3 ನೇ ಅಲೆ ಬಂದ ಮೇಲೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳು ಹಾಗು ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು.

ಡಿಸೆಂಬರ್ 3 ನೇ ವಾರದವರೆಗೂ ಕೊವಿಡ್ ಪ್ರಕರಣ.ಕಡಿಮೆ.ಇದ್ದವು. ಪಾಸಿಟಿವಿಟಿ ಜನವರಿ 11 ಕ್ಕೆ 10.03 % ಬಂದಿದೆ. 28 ಡಿಸೆಂಬರ್ 269 ಪ್ರಕರಣಗಳು ಬೆಂಗಳೂರಿನಲ್ಲಿದ್ದವು ಉಳಿದ ಭಾಗದಲ್ಲಿ 87 ಪ್ರಕರಣ ಇದ್ದವು. ಜನವರಿ 5. ಕ್ಕೆ ಬೆಂಗಳೂರಿನಲ್ಲಿ 3006 ಕರ್ನಾಟಕದಲ್ಲಿ 501 ಪ್ರಕರಣ ಆಗಿದೆ. ಜನವರಿ 11 ಕ್ಕೆ ಬೆಂಗಳೂರಿನಲ್ಲಿ 10800 ಆದರೆ ರಾಜ್ಯದ ಇತರ ಭಾಗದಲ್ಲಿ 3673 ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 32.6% ರಷ್ಟು ವೇಗವಾಗಿದೆ. ರಾಜ್ಯದಲ್ಲಿ 36.44 % ರಷ್ಟಾಗಿದೆ ಎಂದರು.

ಡಿಸೆಂಬರ್ 28 ರಿಂದ ಜನವರಿ 11 ರ ವರೆಗೆ ವೇಗವಾಗಿ ಹೆಚ್ಚಳವಾಗಿದೆ. ಸಕ್ರೀಯ ಪ್ರಕರಣಗಳು ಶೇ 75% ರಷ್ಟು ಬೆಂಗಳೂರಿನಲ್ಲಿದೆ. ಬಹಳ ವೇಗವಾಗಿ ಹರಡುವ ರೋಗ ಎಂದು ಡಬ್ಲೂ ಎಚ್ ಒ ಹೇಳಿದೆ. ಇದು ನೆಗಡಿ,ಕೆಮ್ಮು,ಜ್ವರ ಲಕ್ಷಣಗಳು ಆದರೆ ಇದು ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ ಎಂದರು.

45 ಲಕ್ಷ ಜನರು ಇನ್ನು ಎರಡನೇ.ಡೋಸ್ ತೆಗೆದುಕೊಳ್ಳುವ ಅವಧಿ ಮುಗಿದಿದೆ. ಹೀಗಾಗಿ ಆದಷ್ಟು ಬೇಗ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ 32. ಲಕ್ಷ 15-18 ವರ್ಷದ ಮಕ್ಕಳಲ್ಲಿ ಶೇ 53 ರಷ್ಟು ಮಕ್ಕಳಿಗೆ ನೀಡಲಾಗಿದೆ. ಒಂದು ತಿಂಗಳಲ್ಲಿ ಎರಡನೇ ಡೋಸ್ ಕೊಡಲಾಗುವುದು. 15 ವರ್ಷದ ಒಳಗಿನ ಮಕ್ಕಳಿಗೂ ಸೋಂಕಿನ ಲಕ್ಷಣ ಬರುತ್ತದೆ. ಅವರೂ ಎಚ್ಚರಿಕೆಯಿಂದ ಇರಬೇಕು ಎಂದರು.

2 ನೇ ಡೋಸ್ ಪಡೆದ ಕೊರೊನಾ ವಾರಿಯರ್ಸ್ ಗಳಿಗೆ 3 ನೇ ಡೋಸ್ ಕೊಡಲು ಆರಂಭಿಸಲಾಗಿದೆ. ಸುಮಾರು 65 ಲಕ್ಷ ಡೋಸ್ ಲಸಿಕೆ ಇದೆ. ಹೀಗಾಗಿ ಕೊರೊನಾ ವಾರಿಯರ್ಸ್ ಗಳು ಆದ್ಯತೆ ಮೇಲೆ.ತೆಗೆದುಕೊಳ್ಳಬೇಕು. ರಾಜ್ಯಕ್ಕೆ ಲಸಿಕೆ ಸಮಸ್ಯೆ ಇಲ್ಲ, ವಿಶ್ವದ 37 ದೇಶಗಳಲ್ಲಿ ಇನ್ನೂ ಶೆ 10 ರಷ್ಟು ಲಸಿಕೆ ನೀಡಿಲ್ಲ ಎಂದರು.

ಡಿಸೆಂಬರ್ 1 ರ ಮೊದಲೆ ವಾರ 23% ಜನರು ಆಸ್ಪತ್ರೆಯಲ್ಲಿದ್ದರು,73% ಮನೆಯಲ್ಲಿದ್ದರು. ಜನವರಿ 11 ದಿನದಲ್ಲಿ 6% ಆಸ್ಪತ್ರೆ ಸೇರಿದ್ದಾರೆ. ಹೋಮ್ ಐಸೋಲೇಷನ್ ಜನರು 93% ಇದ್ದಾರೆ.ಪ್ರತಿ ದಿನ 2 ಲಕ್ಷ ಜನರ ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ 1ಲಕ್ಷ ತಪಾಸಣೆ ಮಾಡಲಾಗುತ್ತಿದೆ ಎಂದರು.

ಐದು ಟಿ ಸೂತ್ರ
ಟೆಸ್ಟಿಂಗ್
265 ಟೆಸ್ಟಿಂಗ್ ಲ್ಯಾಬ್ ಕರ್ನಾಟಕದಲ್ಲಿವೆ. ನಿತ್ಯ 2.5. ಲಕ್ಷ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದ್ದು, ಒಟ್ಟು 5 ಜಿನೋಮಿಕ್ ಸಿಕ್ವೆನ್ಸ್ ಲ್ಯಾಬ್ ತೆರೆಯಲಾಗಿದ್ದು , 2. ಬೆಂಗಳೂರು,1.ಮೈಸೂರು,ಮಂಗಳೂರುಮತ್ತು ಬೆಳಗಾವಿಯಲ್ಲಿ 1. ಹುಬ್ಬಳ್ಳಿ, ಬಳ್ಳಾರಿಯಲ್ಲೂ ತೆರೆಯಲು ತೀರ್ಮಾನ ಮಾಡಲಾಗಿದೆ.

ಯಾವುದೇ ರಾಜ್ಯ ಹಾಗೂ ಹೊರದೇಶದಿಂದ ಬರುವವರು 72 ಗಂಟೆ ಮುಂಚೆ ಟೆಸ್ಟ್ ರಿಪೋರ್ಟ್ ತರುವುದು ಕಡ್ಡಾಯ ಮಾಡಲಾಗಿದೆ. 14410 ಕೊವಿಡ್ ಹೋಮ್ ಐಸೋಲೇಷನ್ ನಲ್ಲಿ ಇರುವವರಿಗೆ ಮಾಹಿತಿ ನೀಡಲು ಟೋಲ್ ನಂಬರ್ ನೀಡಲಾಗಿದೆ.1533 ಸಂಖ್ಯೆ ಬೆಂಗಳೂರಿಗೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ 8 ಝೊನ್ ವಾರ್ ರೂಮ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಂಟೇನ್ಮೆಮೆಂಟ್ ಝೊನ್.ಮಾಡಲಾಗುವುದು. 5 ಪ್ರಕರಣಗಳಿದ್ದರೆ, ಮೈಕ್ರೊ.ಕಂಟೆನ್ ಮೆಂಟ್, 15 ಪ್ರಕರಣ.ಇದ್ದರೆ ಕಂಟೈನ್ ಮೆಂಟ್ ಝೋನ್ ಮಾಡಲಾಗುವುದು ಎಂದರು.

84 ಸಾವಿರ ಮೆಡಿಕಲ್ ಸ್ಟಾಫ್ ಇದ್ದಾರೆ, 4 ಸಾವಿರ ವೈದ್ಯರ ನೇಮಕ.ಮಾಡಿಕೊಂಡಿದ್ದೇವೆ. 3 ನೇ ಅಲೆಗೆ 6386 ಬೆಡ್ 147 ತಾಲುಕು ಆಸ್ಪತ್ರೆಗಳಲ್ಲಿ 2928 ಐಸಿಯು ಬೆಡ್ 127 ತಾಲೂಕು ಆಸ್ಪತ್ರೆಗಳು. 665 ಜಿಲ್ಲಾಸ್ಪತ್ರೆಗಳಲ್ಲಿ ಆಕ್ಸಿನೆಟೆಡ್ ಬೆಡ್ 223 ಐಸಿಯು ಬೆಡ್ ಸಿದ್ಧತೆ ಮಾಡಲಾಗಿದೆ. 266 ಪಿಎಚ್ ಎ ಪ್ಲಾಂಟ್ಸ್ ಅಲಾಟ್ ಆಗಿದ್ದು, 235 ಪ್ರಾರಂಭಿಸಲಾಗಿದೆ. 3460 ವೆಂಟಿಲೇಟರ್ ಇವೆ. 8003 ಅಕ್ಷಿಜನ್ ಕಾನ್ಸಂಟ್ರೇಟರ್ ಇವೆ. ಕೇಂದ್ರ ಸರ್ಕಾರ 831 ಕೋಟಿ ರೂ ನೀಡಿದೆ.ಮಕ್ಕಳಿಗೆ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ಕೇಂದ್ರದಲ್ಲಿ ಶೇ 70 ರಷ್ಟು ಮಕ್ಕಳ ಕೊವಿಡ್ ಪ್ರಕರಣಕ್ಕೆ ಮೀಸಲಿಡಲಾಗಿದೆ ಎಂದರು.

4.89 ಕೋಟಿ ಮೊದಲ ಡೋಸ್, 2ನೇ ಡೋಸ್ 3.98 ಕೋಟಿ, 3 ನೇ ಡೋಸ್ 1,81,981 ಜನರು ಪಡೆದುಕೊಂಡಿದ್ದಾರೆ.3 ನೇ ಅಲೆಯಲ್ಲಿ ಆಕ್ಷಿಜನ್ ಕೊರತೆಯ ಲಕ್ಷಣ ಇಲ್ಲ. ಸಾವಿನ ಪ್ರಕರಣ 0.003. ಇದೆ ಎಂದು ತಿಳಿಸಿದರು.

Gayathri SG

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

2 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

2 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

2 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

4 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

4 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

4 hours ago