ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಬಂದ ಕೆಲವೇ ಗಂಟೆಗಳಲ್ಲಿ ರಾಜ್ಯಾದ್ಯಂತ 7 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಶೈಕ್ಷಣಿಕ ಆಸಕ್ತರಲ್ಲಿ ಆತಂಕ ಮೂಡಿಸಿದೆ. 7ರಲ್ಲಿ ನಾಲ್ವರು ವಿದ್ಯಾರ್ಥಿನಿಯರು ಬಾಲಕಿಯರು ಎಂಬುದೇ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.
ಬಾಗಲಕೋಟೆ ಜಿಲ್ಲೆಯ ಬಿಳಗಿ, ಬೀದರ್ ಜಿಲ್ಲೆಯ ಹುಮನಾಬಾದ, ವಿಜಯನಗರ ಜಿಲ್ಲೆಯ ಗರಗ, ಗದಗ ಜಿಲ್ಲೆಯ ಹರ್ತಿ, ಮಂಡ್ಯ ಜಿಲ್ಲೆಯ ಮಹದೇವಪುರ, ಕೊಡಗಿನ ಬಸವನಹಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಈ ಆತ್ಮಹತ್ಯೆಗಳು ವರದಿಯಾಗಿವೆ.
“ಏಳು ಆತ್ಮಹತ್ಯೆ ಘಟನೆಗಳ ಪೈಕಿ ನಾಲ್ವರು ವಿದ್ಯಾರ್ಥಿನಿಯರು. ಇದು ಆಘಾತಕಾರಿ” ಎಂದು ಅಧಿಕಾರಿ ವಿವರಿಸಿದರು.
ಅಧಿಕಾರಿಗಳ ಪ್ರಕಾರ, ಆಗಸ್ಟ್ನಲ್ಲಿ ಸರ್ಕಾರ ಪೂರಕ ಪರೀಕ್ಷೆಯನ್ನು ಘೋಷಿಸಿದರೂ ವಿದ್ಯಾರ್ಥಿಗಳು ತೀವ್ರ ಹೆಜ್ಜೆ ಇಡಲು ಭಯವು ಪ್ರಮುಖ ಕಾರಣವಾಗಿದೆ. ಫಲಿತಾಂಶ ಪ್ರಕಟವಾಗುವ ಮುನ್ನವೇ ಕೊಡಗಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವುದು ಫಲಿತಾಂಶದಲ್ಲಿ ತಿಳಿದು ಬಂದಿದೆ.