ಬೆಂಗಳೂರು: 10 ಸಾವಿರ ಹಣ ನೀಡದ್ದಕ್ಕೆ ಕೋಪಗೊಂಡ ಪತಿಯೊಬ್ಬ ಗರ್ಭಿಣಿ ಪತ್ನಿ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ವೆಸ್ಟ್ ಬೆಂಗಾಲ್ ನಲ್ಲಿ ನಡೆದಿದೆ.
ಪರಾರಿಯಾಗಿದ್ದ ಆರೋಪಿ ಪತಿಯನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಬಂಧಿಸಿದ್ದಾರೆ. ಫೆ.28ರಂದು ವೆಸ್ಟ್ ಬೆಂಗಾಲ್ ನ ನಿವಾಸಿ ಚರಣ್ ಜಿತ್ ಬಿಸ್ವಾಸ್ ಎಂಬಾತ ಪತ್ನಿ ಮೇಲೆ ಆಸಿಡ್ ದಾಳಿ ಮಾಡಿ ಪರಾರಿಯಾಗಿದ್ದ.
ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನಿಖೆಯಲ್ಲಿ ಈ ಜೋಡಿ ಕೃತಕ ಗರ್ಭಧಾರಣೆ ಮೂಲಕ ಹಣ ಮಾಡಲು ಬೆಂಗಳೂರಿನಿಂದ ವೆಸ್ಟ್ ಬೆಂಗಾಲ್ ಗೆ ತೆರಳಿದ್ದರು. ಪತಿ ಈ ಮೂಲಕ ಪತ್ನಿಯಿಂದ ಹಣ ಮಾಡುತ್ತಿದ್ದ. ಇದರಿಂದ ಬಂದ ಹಣವನ್ನು ನೀಡದ್ದಕ್ಕೆ ಕೋಪಗೊಂಡ ಪತಿ ಚರಣ್ ಜಿತ್ ಬಿಸ್ವಾಸ್ ಪತ್ನಿ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಗಾಯಗೊಂಡ ಗರ್ಭಿಣಿ ಪತ್ನಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.