ಬೆಂಗಳೂರು : ಹಿಜಾಬ್ ವಿವಾದದಲ್ಲಿ ಕಾಂಗ್ರೆಸ್ ಕೈವಾಡವಿರುವುದ್ರಲ್ಲಿ ಯಾವುದೇ ಅನುಮಾನವಿಲ್ಲ. ಎಲ್ಲ ಕಾಂಗ್ರೆಸ್ನವರೂ ಅವರ ಪರವಾಗಿಯೇ ಮಾತಾಡುತ್ತಿದ್ದಾರೆ. ಆದ್ರೆ, ಕೇಸರಿ ಹಿಂದೆ ಸಂಘ ಪರಿವಾರದ ಕೈವಾಡ ಇಲ್ಲ ಕಂದಾಯ ಸಚಿವ ಆರ್.ಆಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ‘ಅವರು ಹಿಜಾಬ್ ಧರಿಸಿ ಬಂದಿದ್ದಕ್ಕೆ ಇವರು ಶಾಲು ಧರಿಸಿದ್ದಾರೆ.ಅವರು ಹಿಜಾಬ್ ಬಿಟ್ಟು ಬಂದರೆ ಇವರೂ ಶಾಲು ಬಿಟ್ಟು ಬಿಡುತ್ತಾರೆ. ಹಿಜಾಬ್ ಧರಿಸಿ ಬಂದ್ರೂ ತಪ್ಪೇ, ಶಾಲು ಧರಿಸಿ ಬಂದರೂ ತಪ್ಪೇ. ಕೇಸರಿ ಶಾಲ್ಗೂ ನಮ್ಮ ವಿರೋಧ, ಹಿಜಾಬ್ಗೂ ವಿರೋಧವಿದೆ. ಇನ್ನು ಇದ್ರಲ್ಲಿ ಕಾಂಗ್ರೆಸ್ ಕೈವಾಡ ಇರುವುದ್ರಲ್ಲಿ ಅನುಮಾನವೇ ಇಲ್ಲ.ಎಲ್ಲ ಕಾಂಗ್ರೆಸ್ನವರೂ ಅವರ ಪರವಾಗಿಯೇ ಮಾತಾಡುತ್ತಿದ್ದಾರೆ’ ಎಂದರು.