News Karnataka Kannada
Saturday, April 27 2024
ಬೆಂಗಳೂರು ನಗರ

ಹಿಜಾಬ್  ಪರವೋ ಇಲ್ಲವೇ ಕೇಸರಿ ಪರವಾಗಿ ಇದ್ದರೋ ಸಾರ್ವಜನಿಕವಾಗಿ ಬಹಿರಂಗಪಡಿಸಲಿ: ಡಿಕೆಶಿಗೆ ರೇಣುಕಾಚಾರ್ಯ ಸವಾಲು

Photo Credit :

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಅವರು ಹಿಜಾಬ್  ಪರವೋ ಇಲ್ಲವೇ ಕೇಸರಿ ಪರವಾಗಿ ಇದ್ದರೋ ಎಂಬುದನ್ನು ಸಾರ್ವಜನಿ ಕವಾಗಿ ಬಹಿರಂಗ ಪಡಿಸಲಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಸವಾಲು ಹಾಕಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಸರಿ ಶಾಂತಿಯ ಸಂಕೇತ.ನೀವು ಹಿಜಬ್ ಪರವಾಗಿ ವಕಾಲತ್ತು ವಹಿಸುವುದಾದರೆ, ನಾವು ಕೇಸರಿ ಪರ ಮಾತನಾಡುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಕೇಸರಿ ಪರನಾ ಅಥವಾ ಹಿಜಾಬ್ ಪರನಾ ‌ಡಿಕೆಶಿ ಹೇಳಬೇಕು.ಕೇಸರಿ ಖರೀದಿ ಬಗ್ಗೆ ಮಾತನಾಡಲು ಅವರಿಗೆ ಏನ್ ಹಕ್ಕಿದೆ?ಕೇಸರಿ ಖರೀದಿ ಮಾಡಲು ನಿನ್ನ ಕೇಳಬೇಕಾ..? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಕೇಸರಿ ಶಾಲು ಸಾವಿರ ಅಲ್ಲ ಲಕ್ಷ ಖರೀದಿ‌ ಮಾಡುತ್ತೇವೆ. ಕೇಸರಿ ಶಾಂತಿಯ ‌ಸಂದೇಶ. ನೀವು ಹಿಜಬ್ ಖರೀದಿಸಿ ನೀಡುವುದಾದರೆ, ನಾವು ಖರೀದಿ ಮಾಡುವುದರಲ್ಲಿ ತಪ್ಪು ಇಲ್ಲ ಸಮರ್ಥಿಕೊಂಡರು.

ಈಗ ರಾಜ್ಯದಲ್ಲಿ ನಡೆಯುತ್ತಿರುವ ಕೋಮು‌ಗಲಭೆಗೆ ಕಾಂಗ್ರೆಸ್ ಮುಖಂಡರು ಪ್ರಚೋದನೆ ಮಾಡುತ್ತಿದ್ದಾರೆ.ಮುಂದೆ ಇದರ ಪ್ರತಿಫಲ ಅನುಭವಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಡರು. ಕೆಲ ಭಯೋತ್ಪಾದಕ ಸಂಘಟನೆ ತಪ್ಪಾಗಿ ಇದನ್ನು ಸುದ್ದಿ ಮಾಡುತ್ತಿವೆ.ಶಾಲೆಯಲ್ಲಿ ಕೇಸರಿ ಹಾಗೂ ಹಿಜಾಬ್ ಧರಿಸಬಾರದು.ಸಮವಸ್ತ್ರ ಎಲ್ಲಾ ಕಾಲದಲ್ಲೂ ಇದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಪ್ರಚೋಧನೆ ಕೊಡುತ್ತಿದ್ದಾರೆ. ಹಿಜಾಬ್ ಧರಿಸುವ ಬದಲು ಸಮವಸ್ತ್ರ ಧರಿಸಬೇಕು.ಶಿಕ್ಷಣ ಪ್ರತಿಯೊಂದು ಮಕ್ಕಳ ಹಕ್ಕು.ಇದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಶಿಕ್ಷಣದಲ್ಲಿ ಕೇಸರಿಕರಣ‌ ಮಾಡುವುದಿಲ್ಲ. ರಾಜಕಾರಣದಲ್ಲಿ ಕೇಸರಿ ಶಾಲು ಕೊಡುತ್ತಾ ಬಂದಿದ್ದೇವೆ.ಕೇಸರಿ ವಿರೋಧ ಮಾಡಿದರೆ, ಚುನಾವಣೆ ಬಂದಾಗ ಕಾಂಗ್ರೆಸ್ ಗೆ ಗೊತ್ತಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ನಾವು ಕೋಮುವಾದಿಗಳಲ್ಲ.ಶಿಕ್ಷಣದಲ್ಲಿ ಧರ್ಮ ಹಾಗೂ ರಾಜಕಾರಣ ಮಿಶ್ರಣ ಆಗಬಾರದು. ಕೇರಳ ಹಾಗೂ ಬಾಂಬೆ ಕೋರ್ಟ್ ಹೇಗೆ ಹೇಳಿದೆ ಅದೇ ರೀತಿಯಲ್ಲಿ ಇರಬೇಕು.ನ್ಯಾಯಾಂಗದ ಬಗ್ಗೆ ಮಾತನಾಡುವುದಿಲ್ಲ.ನಾವು ಮುಸ್ಲಿಂ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಮೇಲೆ ಕೆಪಿಸಿಸಿ ಅಧ್ಯಕ್ಷರು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು,ಒಂದು ಡಿಕೆಶಿಗೆ ಹಾತಾಶೆ ಮನೋಭಾವ ಇದೆ.ಸರ್ಕಾರ ವರ್ಚಸ್ಸು ಇನ್ನಷ್ಟು ಹೆಚ್ಚಾಗುತ್ತಾ.ಇದು‌ ಕಾಂಗ್ರೆಸ್ ಗೆ ಹಿನ್ನಡೆ ‌ಹೀಗಾಗಿ ಹತಾಶೆಯಿಂದ ಮಾತಾನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ನಮ್ಮ ಸರ್ಕಾರ ಸುಭದ್ರವಾಗಿದ್ದು, ಯಾವ ಶಕ್ತಿಗಳು ಏನು ಮಾಡಲು ಸಾಧ್ಯವಿಲ್ಲ ‌ ಹಿಂದೆ ವೀರೇಂದ್ರ ಪಾಟೀಲ್ ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಕೋಮುಗಲಭೆ ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಯಶಸ್ಸು ಕಾಣುವುದಿಲ್ಲ ಎಂದು ಹೇಳಿದರು. ಸಚಿವ ಸ್ಥಾನ ಸಿಗುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ನಾನು ಜ್ಯೋತಿಷಿ ಅಲ್ಲ. ರಾಷ್ಟ್ರೀಯ ನಾಯಕರು ಹಾಗೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದರು.

ಸೂಕ್ತ ಸಂದರ್ಭದಲ್ಲಿ ‌ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ.ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುರ್ನರಚನೆ ಸಿಎಂ ಪರಮಾಧಿಕಾರ ಅವರು ತೀರ್ಮಾನ ನಿರ್ಧರಿಸುತ್ತಾರೆ.ಸಚಿವ ದೂರು ಎಲ್ಲಿ ಹೇಳಬೇಕೊ ಅಲ್ಲಿ ಹೇಳಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು