ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗೆ ತಕ್ಕ ಉತ್ತರ ನೀಡಿರುವರು.
ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಬೀದಿ ಬೀದಿ ಅಲೆಯುತ್ತಿದ್ದರು. ಅವರನ್ನು ಯಾರೋ ತಂದು ಇಲ್ಲಿ ರಾಜ್ಯಾಧ್ಯಕ್ಷನಾಗಿ ಮಾಡಿರುವರು. ಇವರು ಪಕ್ಷ ಕಟ್ಟುವುದಲ್ಲ, ಯಡಿಯೂರಪ್ಪ ಅವರನ್ನು ಕೆಡವುದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು.
ನಿಮ್ಮ ಮಾತುಗಳಲ್ಲೇ ಕಾಂಗ್ರೆಸ್ ಸಂಸ್ಕೃತಿಯು ತಿಳಿಯುವುದು. ಕಾಡುಮನುಷ್ಯ ಇತ್ಯಾದಿ ಪದಗಳು ಕಾಂಗ್ರೆಸ್ ಸಂಸ್ಕೃತಿ, ಜನರೊಂದಿಗೆ ಸ್ಪಂದಿಸದ ನಿಮ್ಮನ್ನು ಚಾಮುಂಡೇಶ್ವರಿ ಜನರು ಕೂಡ ತಿರಸ್ಕರಿಸಿರುವರು ಎಂದು ನಳಿನ್ ತಿರುಗೇಟು ನೀಡಿರುವರು.
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಹಲ್ಲು ಹಾಗೂ ಉಗುರು ಇಲ್ಲದೆ ಇರುವ ಹುಲಿಯಂತೆ ಎಂದು ನಳಿನ್ ವ್ಯಂಗ್ಯವಾಡಿರುವರು.