News Karnataka Kannada
Monday, April 29 2024
ಬೆಂಗಳೂರು ನಗರ

ಸಿಎಂ‌ ಮನೆ ಮುಂದೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ತೀರ್ಮಾನ

Dk Shivakumar
Photo Credit :

ಬೆಂಗಳೂರು : ಕೋವಿಡ್ ಮಾರ್ಗಸೂಚಿ ಪಾಲನೆ‌ ಮಾಡದ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕುವಂತೆ ಸಿಎಂ‌ ಮನೆ ಮುಂದೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ತೀರ್ಮಾನ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾವು ಸಿಎಂ‌ ಭೇಟಿ ಮಾಡಲು ಹೋಗುವುದು ನೆಂಟಸ್ಥಿಕೆ ‌ಮಾಡಲಲ್ಲ. ನಾವೇನು ಮಾಡುತ್ತೇವೆ ಎನ್ನುವುದನ್ನು ನೀವು ನೋಡ್ತಾ ಇರಿ ಎಂದರು.

ಸಿದ್ದರಾಮಯ್ಯನವರಿಗೆ ಕಾಯುತ್ತಿದ್ದೇನೆ, ಅವರು ಮೈಸೂರಿಗೆ ಹೋಗಿದ್ದಾರೆ. ಎನು ಮಾಡಬೇಕು ಅಲ್ಲಿಗೆ ಹೋಗಿ ಮಾಡುತ್ತಿದ್ದೇವೆ. ಈಗಾಗಲೇ ಸಿಎಸ್ ಗೆ ಪತ್ರ ಬರೆದಿದ್ದೇನೆ. ಈಗ ಸಹಿ ಹಾಕಿದ್ದೇನೆ. ನಾವು ಸುಮ್ಮನೆ ಕುಳಿತು ಕೊಳ್ಳುವವರಲ್ಲ. ನೀವು ನೋಡುತ್ತಿರಿ ಎಂದು ಡಿ‌ಕೆ ಶಿವಕುಮಾರ್ ಹೇಳಿದರು.

ಸಚಿವ ಆರ್ ಅಶೋಕ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನು ಅವರಷ್ಟು ಅತಿ ಬುದ್ದಿವಂತನಲ್ಲ. ಅವರು ಕೋವಿಡ್ ಬಂದು ರೆಸ್ಟ್ ಮಾಡುತ್ತಿದ್ದರು, ಈಗ ಪಾಪ ಮಾತನಾಡುತ್ತಿದ್ದಾರೆ. ಇನ್ನಷ್ಟು ರೆಸ್ಟ್ ಮಾಡಲಿ. ಮೇಕೆದಾಟು ಯೋಜನೆ ಕುಡಿಯುವ ನೀರಿಗಾಗಿ ಕನಕಪುರದ ಒಂದೇ ಒಂದು ಎಕರೆಗೆ ಬಳಕೆಯಾಗಲ್ಲ. ಬೆಂಗಳೂರಿನ ‌ಕುಡಿಯುವ ನೀರಿಗಾಗಿ ಯೋಜನೆ ಅದು. ಹಾಸನ ತುಮಕೂರು, ಮೈಸೂರು ರೈತರಿಗೆ ಅನುಕೂಲ ಆಗಲಿದೆ ಎಂದರು.

ಅಫೆನ್ಸ್ ಇಸ್ ದ ಬೆಸ್ಟ್ ಡಿಫೆನ್ಸ್ ಎಂಬ ಡಾ ಅಶ್ವಥ್ ನಾರಾಯಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, “ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡವರ ಬಗ್ಗೆ ಮಾತನಾಡುವುದು ಬೇಡ” ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು