ಬೆಂಗಳೂರು : ಬೆಂಗಳೂರಿನ ಬಾಗಲುಕುಂಟೆಯಲ್ಲಿ ಸಾಲಭಾದೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬಾಗಲುಕುಂಟೆಯ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ಒಬ್ಬರು ಮನೆಯಲ್ಲೇ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಗಲಕುಂಟೆಯ ಭಾನುಪ್ರಕಾಶ್ ಎಂಬುವರು ತಮ್ಮ ಪತ್ನಿ, ಹಾಗೂ ಮಗಳಿಗೆ ಹಾಲಿನಲ್ಲಿ ರಾಸಾಯನಿಕ ಬೆರೆಸಿ ಕುಡಿದಿದ್ದಾರೆ. ಈ ವೇಳೆ ಭಾನುಪ್ರಕಾಶ್ ಪತ್ನಿ ಗೀತಾ (37) ಮನೆಯಲ್ಲೇ ಮೃತಪಟ್ಟಿದ್ದಾರೆ.
ಇನ್ನು ಭಾನುಪ್ರಕಾಶ್ ಹಾಗೂ ಮಗಳು ಲೇಖನ (14) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.