News Karnataka Kannada
Saturday, May 04 2024
ಬೆಂಗಳೂರು ನಗರ

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ

Latest News
Photo Credit : News Kannada

ಬೆಂಗಳೂರು:  ರಾಜ್ಯಾದ್ಯಂತ ಶನಿವಾರ ನಡೆಯಬೇಕಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಎಂಟು ವರ್ಷಗಳ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಉದ್ಯೋಗ ಆಕಾಂಕ್ಷಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ.

ಕಾಲೇಜು ಶಿಕ್ಷಣ ಇಲಾಖೆಯ ವಿವಿಧ ಪ್ರಥಮ ದರ್ಜೆ ಕಾಲೇಜು ಗಳಲ್ಲಿನ ಮನೋವಿಜ್ಞಾನ ವಿಷಯದ ಹುದ್ದೆಗಳನ್ನು ಸಸ್ಯಶಾಸ್ತ್ರ ಮತ್ತು ಪ್ರಾಣಿ ಶಾಸ್ತ್ರ ವಿಷಯಗಳಿಗೆ ವರ್ಗಾಯಿಸಿ ಆದೇಶಿಸಿದ್ದ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಮನೋವಿಜ್ಞಾನ ವಿಷಯದ  ಸಹಾಯಕ ಪ್ರಾಧ್ಯಾಪಕ ಹುದ್ದೆಯ ನಿರೀಕ್ಷೆಯಲ್ಲಿದ್ದ ಸಾವಿರಾರು ಉದ್ಯೋಗ ಆಕಾಂಕ್ಷಿಗಳು  ಈ ಆದೇಶದ ವಿರುದ್ದ ನ್ಯಾಯಲಯದ ಮೊರೆ ಹೋಗಿದ್ದರು.

ಇದಕ್ಕೆ ಸಂಬಂಧಿಸಿದಂತೆ ವಾದವನ್ನಾಲಿಸಿದ ನ್ಯಾಯಾಲಯ ಈ ಆದೇಶವನ್ನು 05.10.2021 ರವರೆಗೆ ತಡೆ ಹಿಡಿಯುವಂತೆ ಸೂಚನೆ ನೀಡಿತ್ತು, ಇದರ ನಡುವೆಯೇ ಇಲಾಖೆಯು ದಿನಾಂಕ 01.10.2021 ರಂದು ಇಲಾಖೆಯ ವಿವಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿ ಗಾಗಿ ನೇಮಕಾತಿ ಅಧಿಸೂಚನೆ ಯನ್ನು ಹೊರಡಿಸಿದ್ದು ಇದರಲ್ಲಿ ಮನೋವಿಜ್ಞಾನ ವಿಷಯದ ಹುದ್ದೆಗಳನ್ನು ಕೈ ಬಿಟ್ಟಿರುವುದು ದೀರ್ಘಕಾಲದಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನಿರೀಕ್ಷೆಯಲ್ಲಿದ್ದ ಸಾವಿರಾರು  ಉದ್ಯೋಗಾಕಾಂಕ್ಷಿಗಳು ಎನ್ ಇಟಿ, ಕೆಎಸ್‌ಟಿ ಪಾಸು ಮಾಡಿ  ಪಿಹೆಚ್‌ಡಿ ಪದವಿ ಪಡೆದು ಮತ್ತು ಹತ್ತಾರು ವರ್ಷಗಳು ಟೀಚಿಂಗ್ ಅನುಭವ ಪಡೆದಿರುವ ಉದ್ಯೋಗ ಆಕಾಂಕ್ಷಿಗಳಲ್ಲಿ ಈ ಅವಕಾಶ ಕೈತಪ್ಪುವ ಆತಂಕದಲ್ಲಿದ್ದಾರೆ.

ಇದಕ್ಕೆ ಸಂಬಂದಿಸಿದಂತೆ ರಾಜ್ಯ ಹೈಕೋರ್ಟ್  ಅರ್ಜಿದಾರರ ವಾದವನ್ನು ಆಲಿಸಿ ಈ ನೇಮಕಾತಿ ಅಧಿಸೂಚನೆಯಲ್ಲಿ      ಮನೋ ವಿಜ್ಞಾನ ವಿಷಯದಿಂದ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಗೆ ವರ್ಗಾವಣೆಗೊಂಡಿದ್ದ ಹುದ್ದೆಗಳಿಗೆ ಸಂಬಂಧಿಸಿದ  ನೇಮಕಾತಿ ಪ್ರಕ್ರಿಯೆಗೆ ಮಾ.11 ರಂದು  ತಡೆ ನೀಡಿದೆ. ಕಾಲೇಜು ಇಲಾಖೆಯ ಆದೇಶವನ್ನು ಪ್ರಶ್ನಿಸಿದ ಬೆಂಗಳೂರಿನ  ಡಾ. ಮೀನಾಕ್ಷಿ ಎನ್ , ಡಾ. ವಿಶ್ವನಾಥ್ ಕೆ,  ಇನ್ನು ರಾಜ್ಯದ ವಿವಿಧ ಜಿಲ್ಲೆಗಳ 15 ಕ್ಕೂ  ಹೆಚ್ಚು ಸಹಾಯಕ ಪ್ರಾಧ್ಯಾಪಕರು  ನ್ಯಾಯಾಲಯದಲ್ಲಿ  ಅರ್ಜಿ  ಸಲ್ಲಿಸಿದ್ದರು.

ಬದಲಾದ, ಬದಲಾಗುತ್ತಿರುವ ಜೀವನ ಶೈಲಿ, ಕರೋನ ಸಂಕಷ್ಟದ ನಡುವೆ ವಿವಿಧ ವರ್ತನಾ ಸಮಸ್ಯೆಗಳು ಹೆಚ್ಚುತ್ತಿದ್ದು ಸಮಾಜದಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಬೇಕಾಗಿರುವ ಮನೋವಿಜ್ಞಾನ ವಿಷಯದ  ಹುದ್ದೆಗಳನ್ನು ಮೊಟಕುಗೊಳಿಸಿದರೆ ಪ್ರಸ್ತುತ ಮತ್ತು  ಮುಂದಿನ ದಿನಗಳಲ್ಲಿ ಸಮಾಜಕ್ಕೆ ತುಂಬಾಲಾರದ ನಷ್ಟವಾಗುತ್ತದೆ ಎಂಬುದು ಉದ್ದೋಗಾಂಕ್ಷಿಗಳ  ಅಳಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು