News Karnataka Kannada
Saturday, May 04 2024
ಬೆಂಗಳೂರು ನಗರ

ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ

Siddaraiyya
Photo Credit : G Mohan

ಬೆಂಗಳೂರು : ರಾಜ್ಯ ವಿದಾನ ಮಂಡಲ ಅಧಿವೇಶನ ಇಂದಿನಿಂದ ಮತ್ತೆ ಆರಂಭವಾಗಿದೆ. ಆರಂಭದಲ್ಲಿಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರು ಹಾಗೂ ಸಿಎಂ ಬೊಮ್ಮಾಯಿ ಅವರನ್ನು ಟೀಕಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಪೀಕರ್ ಮಧ್ಯ ಪ್ರವೇಶ ಮಾಡಿ ಬೊಮ್ಮಾಯಿ ಅವರು ನಿಮ್ಮ ಫ್ರೆಂಡ್ ಎಂದು ಹೇಳುತ್ತಾ, ಟೀಕಿಸುವುದು ಸರಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಸ್ನೇಹವೇ ಬೇರೆ. ರಾಜಕಾರಣವೇ ಬೇರೆ. ನೀವು ಆರೆಸ್ಸೆಸ್ ನಿಂದ ಬಂದವರು. ಸಿದ್ಧಾಂತ ಬೇರೆ ಇದೆ. ಸ್ನೇಹ ಹೊರಗೆ ಇರುತ್ತದೆ. ಇಲ್ಲಿ ರಾಜಕಾರಣ ಮಾತ್ರ ಇರುತ್ತದೆ ಎಂದು ಕಿಚಾಯಿಸಿದರು.

ಬಿಜೆಪಿ ಸರ್ಕಾರ ಡಬಲ್ ಇಂಜೀನ್ ನಿರ್ಮಿಸಿಕೊಂಡಿದ್ದರಿಂದಾಗಿಯೇ ಡಬ್ಬಾ ಸರ್ಕಾರವಾಗಿದೆ. ಜನರಿಗೆ ಮೋಸ ಮಾಡುವುದೇ ಇವರ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಚಿವ ಮುನಿರತ್ನ ಹಾಗೂ ಆರ್. ಅಶೋಕ್ ಹೊರಗೆ ಹೋಗುವ ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ಕುತಕೊಳ್ರಪ್ಪ. ಚರ್ಚೆಯ ವಿಷಯದಲ್ಲಿ ಏಕೆ ಹೀಗೆ ಹೋಗುತ್ತೀರಿ ಎಂದು ಕಿಡಿಕಾರಿದ್ದಾರೆ.

ಆಗ ಮಾಜಿ ಸಿಎಂ ಯಡಿಯೂರಪ್ಪ ಅವರು ಮಧ್ಯ ಪ್ರವೇಶಿಸಿ ಅವರು ಹೊರಗೆ ಹೋಗುತ್ತಿದ್ದವರು ನೀವು ಕರೆದ ಕೂಡಲೇ ಮರಳಿ ಬಂದಿದ್ದಾರೆ ನೋಡಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನೀವು ಈಗ ಹಿಂದೆ ಕುಳಿತಿದ್ದೀರಿ. ಹೀಗಾಗಿ ನಿಮಗೆ ಎಲ್ಲವೂ ಅರ್ಥವಾಗುತ್ತಿದೆ. ನೀವು ಎಲ್ಲವನ್ನೂ ಗಮನಿಸುತ್ತಿದ್ದೀರಿ ಎಂದು ಕಾಲು ಎಳೆಯುವ ಕಾರ್ಯ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು