ಬೆಂಗಳೂರು, ; ಸರಗಳ್ಳನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಯಿಂದ 1.99 ಲಕ್ಷ ರೂ. ಬೆಲೆಯ 41 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ನಂದಿನಿ ಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯ ಬಂಧನದಿಂದ ನಂದಿನಿ ಲೇಔಟ್ ಠಾಣೆಯ ಎರಡು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.
ವಿಜಯಾನಂದನಗರದ 4ನೆ ಕ್ರಾಸ್, 3ನೆ ಮುಖ್ಯರಸ್ತೆ ನಿವಾಸಿ ಸ್ಫೂರ್ತಿ ಎಂಬುವವರು ಆ.19ರಂದು ಸಂಜೆ 7 ಗಂಟೆಗೆ ತರಕಾರಿ ತರಲು ಕೃಷ್ಣಾನಂದನಗರದ ತರಕಾರಿ ಮಾರ್ಕೆಟ್ಗೆ ಹೋಗಿ ವಾಪಸ್ ಬರುತ್ತಿದ್ದಾಗ ದುರ್ಗಮ್ಮ ದೇವಸ್ಥಾನದ ರಸ್ತೆ ಬಳಿ ಸರಗಳ್ಳ ಇವರ ಕತ್ತಿನಲ್ಲಿದ್ದ ಚಿನ್ನದ ಗುಂಡು, ತಾಳಿ ಇದ್ದ ರೋಲ್ಡ್ಗೋಲ್ಡ್ ಮಾಂಗಲ್ಯ ಸರ ಎಗರಿಸಿ ಪರಾರಿಯಾಗುತ್ತಿದ್ದನು.
ಸರಗಳ್ಳನನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು : ಎರಡು ಲಕ್ಷ ರೂ ಚಿನ್ನಾಭರಣ ವಶ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.