ಬೆಂಗಳೂರು,ಏ.13 : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಸಾವಿನ ಬಗ್ಗೆ ಅನುಕಂಪವಿದೆ.
ಅವರ ಸ್ನೇಹಿತರಿಬ್ಬರು ಏಕೆ ಬೇರೆ ಬೇರೆ ರೂಮ್ನಲ್ಲಿದ್ದರು ಎಂದು ಪ್ರಶ್ನಿಸಿ, ತನಿಖೆಯಾದರೆ ಸತ್ಯಾಂಶ ಹೊರಬಲಿದೆ ಎಂದರು. ಗುತ್ತಿಗೆದಾರ ಮಾಡಿರುವ ಆರೋಪ ಸಾಬೀತಾದ ಮೇಲೆ ಸಚಿವ ಈಶ್ವರಪ್ಪ ಅವರು ರಾಜೀನಾಮೆ ಕೊಡಬೇಕಷ್ಟೇ. ತನಿಖೆ ನಡೆದು ಸತ್ಯಾಂಶ ಹೊರಬಂದರೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಗುತ್ತಿಗೆದಾರರು ಪ್ರಧಾನಿಗೆ ದೂರು ನೀಡುವ ಮುನ್ನ ಕಾಂಗ್ರೆಸ್ ನಾಯಕರ ಮನೆಯಲ್ಲಿ ಡ್ರಾಫ್ಟ್ ಮಾಡಿದರು ಎಂದು ಗಂಭೀರ ಆರೋಪ ಮಾಡಿದರು.
ಈ ಬಗ್ಗೆ ತನಿಖೆಯಾದರೆ ಎಲ್ಲವೂ ಹೊರಬರಲಿದೆ, ಸತ್ಯಾಂಶವೂ ಗೊತ್ತಾಗುತ್ತದೆ. ಶೇ.40ರಷ್ಟು ಕಮೀಷನ್ ಎಂದು ಆರೋಪಿಸಿದ್ದಾರೆ. ಗುತ್ತಿಗೆದಾರರು ಶೇ.35ರ ಕಮೀಷನ್ಗೆ ಕೆಲಸ ಮಾಡುತ್ತಾರ ಎಂದು ಅವರು ಪ್ರಶ್ನಿಸಿದರು.