ಬೆಂಗಳೂರು: ರಾಜ್ಯದಲ್ಲಿ ಧರ್ಮ ಪಾಲನೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ನಾವು ವಿರೋಧಿಸುವುದು ಇಲ್ಲ. ಶಿಕ್ಷಣ ಬೇಕಾದರೇ ಅಲ್ಲಿನ ನಿಯಮಗಳನ್ನು ಪಾಲಿಸಬೇಕು ಶಿಕ್ಷಣ ಬೇಕಾದವರು ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು ಎಂಬುದಾಗಿ ಶಿಕ್ಷಣ ಸಚಿವರು ಖಡಕ್ ಸೂಚನೆ ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಮಾಜಿ ಸಿಎಂ ಸಿದ್ಧರಾಮಯ್ಯಗೆ ನಾಚಿಕೆ ಆಗಬೇಕು. ಒಂದು ಸಮುದಾಯದ ಮತವನ್ನು ಪಡೆಯೋದಕ್ಕೆ ಅವರು ಬೇಕಾದಂತೆ ಮಾತನಾಡುತ್ತಿದ್ದಾರೆ. ಅವರ ಅವಧಿಯಲ್ಲಿಯೇ ಈ ಸಮವಸ್ತ್ರ ಮಾಡಿದ್ದು. ಇದರ ಹಿಂದೆ ನಮ್ಮ ಯಾವುದೇ ಪಿತೂರಿಯಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಶಿಕ್ಷಣ ಬೇಕಾದವರು ಶಾಲೆಗೆ ಸಮವಸ್ತ್ರ ಧರಿಸಿಯೇ ಬರಬೇಕು. ಅದರ ಹೊರತಾಗಿ ಬೇರಾವುದೇ ಉಡುಪು ಧರಿಸೋದಕ್ಕೆ ಅವಕಾಶವಿಲ್ಲ. ಧರ್ಮ ಪಾಲನೆ ಮಾಡುವುದಕ್ಕೆ ನಾವು ವಿರೋಧಿಸಿಲ್ಲ. ಶಿಕ್ಷಣ ಬೇಕಾದ್ರೆ ಅಲ್ಲಿಯ ನಿಮಯದಂತೆ ಬರಬೇಕು. ಹೈಕೋರ್ಟ್ ತೀರ್ಪು ಆಧರಿಸಿ, ಸಮವಸ್ತ್ರ ಸಂಹಿತಿಯ ನಿಯಮದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಈಗಿರುವ ನಿಯಮ ಮುಂದುವರೆಯಲಿದೆ ಎಂದು ಹೇಳಿದರು.