ಬೆಂಗಳೂರು: ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಕಂಟ್ರೋಲ್ ಸಭೆ ನಡೆಯುತ್ತಿದೆ. ಕೊರೋನಾ ಇಳಿಮುಖ ಆಗುತ್ತಿರುವ ಕಾರಣ ಶಾಲಾ, ಕಾಲೇಜುಗಳ ಪುನರಾರಂಭ ಕುರಿತಂತೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಬೆಂಗಳೂರಿನಲ್ಲಿ ಶಾಲೆಗಳನ್ನು ಆರಂಭಿಸೋ ಕುರಿತಂತೆ ಇಂದು ಸಿಎಂ ನೇತೃತ್ವದಲ್ಲಿ ನಡೆಯುತ್ತಿರುವಂತ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ತಜ್ಞರು ನೀಡುವಂತ ವರದಿ, ಅಭಿಪ್ರಾಯದ ಮೇಲೆ ತೀರ್ಮಾನವನ್ನು ಸಿಎಂ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು. ಈ ಮೂಲಕ ಬಹುತೇಕ ಶಾಲೆಗಳು ಆರಂಭಿಸೋ ನಿರ್ಧಾರ ಹೊರ ಬೀಳೋ ಸಾಧ್ಯತೆಯನ್ನು ನೀಡಿದ್ದಾರೆ.