ಬೆಂಗಳೂರು: ಕಂದಾಯ ದಾಖಲೆಗಳು ಸಹಿತ ಪಿಂಚಣಿಯನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸೋ ಸಂಬಂಧ ಹಲೋ ಕಂದಾಯ ಸಚಿವರೆ ಸಹಾಯ ವಾಣಿಯನ್ನು ವಿಧಾನಸೌಧದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಲೋಕಾರ್ಪಣೆ ಮಾಡಿದರು.
ಇನ್ಮುಂದೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ರೇ, ಜಸ್ಟ್ 72 ಗಂಟೆಯಲ್ಲೇ ನಿಮ್ಮ ಪಿಂಚಣಿ ಮನೆ ಬಾಗಿಲಿಗೆ ಬರಲಿದೆ.
ಬಳಿಕ ಮಾತನಾಡಿದಸಿಎಂ ಬೊಮ್ಮಾಯಿ, ಅತ್ಯಂತ ಸಂತೋಷದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ. ಆಡಳಿತ ಜನಪರವಾಗಿ ಇರಬೇಕು. ರಾಜಕಾರಣ ಕೂಡ ಜನಪರವಾಗಿ ಇರಬೇಕು. ಒಂದು ಜನರಪರವಾಗಿರುವುದು ಪಿಪಲ್ ಪಾಲಿಟಿಕ್ಸ್ ಆಗಿರಬೇಕು. ಅಧಿಕಾರ ಪರವಾಗಿ ಇರುವುದು ಪವರ್ ಪಾಲಿಟಿಕ್ಸ್. ಅಧಿಕಾರದಿಂದ ಜನಪರ ಕೆಲಸ ಮಾಡಿ ಎಂದರು.
ಕೆಲವೊಂದು ವ್ಯವಸ್ಥೆ ಸರಿ ಮಾಡಲು ಈ ಹಿಂದಿನಿಂದ ಆಗಿರಲಿಲ್ಲ. ಇದೀಗ ಹಠದಿಂದ ಕಂದಾಯ ಸಚಿವರು ಬದಲಾವಣೆ ಮಾಡಿದ್ದಾರೆ. ಇದರಿಂದ ಪಿಂಚಣಿ ವ್ಯವಸ್ಥೆ ಮನೆ ಮನೆ ಕೊಡಲು ಕಂದಾಯ ಸಚಿವರು ಮಾಡಿದ್ದಾರೆ.
ಸಮಾಜದಲ್ಲಿ ಯಾರಿಗೆ ಆಸರೆ ಇಲ್ಲ, ಅವರಿಗೆ ಈ ಪಿಂಚಣಿ ಕೊಡಲಾಗುತ್ತದೆ. ಅಂಗವಿಕಲರೂ ಓಡಾಟ ಮಾಡಲು ಆಗಲ್ಲ. ನನ್ನ ಮನೆಗೆ ಈಗಲೂ ಸಮಸ್ಯೆ ಅಂತ ಬರ್ತಾರೆ.. ಈ ಸಮಸ್ಯೆ ಅರಿತು ಇಂದು ಕಂದಾಯ ಇಲಾಖೆ ಮಾಡ್ತಿದೆ. ಮನೆ ಬಾಗಿಲಿಗೆ ಸರ್ಕಾರ ಬರುವುದು ಅಂದರೆ ನಿಜವಾಗಿಯೂ ಅಧಿಕಾರದ ವಿಕೇಂದ್ರೀಕರಣವಾಗಲಿದೆ.
ಅಧಿಕಾರ ಜೇನುತುಪ್ಪದಂತೆ ಜನರ ಬಳಿ ಹರಿದು ಹೋಗುವುದು. ಅಧಿಕಾರ ಸ್ವೀಕಾರ ಮಾಡಿ ಮೊದಲ ಬಾರಿಗೆ ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಡುವುದು ಯೋಜನೆ ಕೊಟ್ಟೆ. ರೈತರ ಮಕ್ಕಳು ಕೂಡ ಶಿಕ್ಷಣದಲ್ಲಿ ಮುಂದೆ ಬರಬೇಕು. ಅಂಗವಿಕಲರಿಗೆ ಔಷಧಿ ತೆಗೆದುಕೊಳ್ಳುವುದು ಬಹಳಷ್ಟು ಕಷ್ಟದ ಕೆಲಸ ಎಂದು ಹೇಳಿದರು.