ಬೆಂಗಳೂರು: ವಿದ್ಯುತ್ ಕಂಬದ ತಂತಿ ತಗುಲಿ ದಂಪತಿ ಮೃತಪಟ್ಟಿರುವ ಘಟನೆ ಇಲ್ಲಿನ ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ತಮಿಳುನಾಡು ರಾಜ್ಯದ ಮಧುರೈ ಮೂಲದ ದಂಪತಿ ವೀರಣ್ಣ ಮತ್ತು ಲಾವಣ್ಯ ಎಂದು ಗುರುತಿಸಲಾಗಿದೆ. ಈ ದಂಪತಿ ನಗರದ ಬಂಡೆಪಾಳ್ಯದಲ್ಲಿದ್ದ ಹಲವು ವರ್ಷಗಳಿಂದ ಮನೆಯ ಮೊದಲ ಮಹಡಿಯಲ್ಲಿ ವಾಸವಿದ್ದು, ಕಟ್ಟಡಕ್ಕೆ ತಾಗಿಕೊಂಡಂತೆ ವಿದ್ಯುತ್ ಕಂಬದಿಂದ ತಂತಿ ಇತ್ತು ಎನ್ನಲಾಗಿದೆ. ಶನಿವಾರ ಎಂದಿನಂತೆ ಲಾವಣ್ಯ ಬಟ್ಟೆ ತೊಳೆದು, ರಾತ್ರಿ ವೇಳೆ ಒಣಗಿದ್ದ ಬಟ್ಟೆ ತೆಗೆಯುವಾಗ ಏಕಾಏಕಿ ವಿದ್ಯುತ್ ಹರಿಯುತ್ತಿದ್ದ ತಂತಿ ಮುಟ್ಟಿದ್ದಾರೆ.
ಇದರ ಪರಿಣಾಮ ಕ್ಷರ್ಣಾರ್ಧದಲ್ಲಿ ಜೋರಾಗಿ ಕೂಗಿಕೊಂಡಿದ್ದಾರೆ. ಗಾಬರಿಗೊಂಡು ಪತಿ ವೀರಣ್ಣ, ರಕ್ಷಿಸಲು ಹೋಗಿ ಅವರು ಸ್ಳಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ದಂಪತಿಗೆ ಒಂದು ಗಂಡು, ಹೆಣ್ಣು ಮಗುವಿದೆ.