News Karnataka Kannada
Wednesday, May 08 2024
ಬೆಂಗಳೂರು ನಗರ

ರಾಜ್ಯದಲ್ಲಿ ವಿದ್ಯಾಗಮ ಕಲಿಕೆ ಮರು ಜಾರಿ

B C Nagesh
Photo Credit :

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ನಿರಂತರ ಕಲಿಕೆಗೆ ಅವಕಾಶ ಮಾಡಿಕೊಡಲು ಶಿಕ್ಷಣ ಇಲಾಖೆ ವಿದ್ಯಾಗಮ ಮರು ಜಾರಿ ಮಾಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಬೆಂಗಳೂರು ಹೊರತು ಪಡಿಸಿ ಹೊರತು ಪಡಿಸಿ ರಾಜ್ಯದಲ್ಲಿ ಶಾಲಾ ಕಾಲೇಜುಗಳು ತೆರೆಯಲು ಅವಕಾಶ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಆನ್‌ಲೈನ್ ತರಗತಿಗಳ ಜತೆಗೆ ವಿದ್ಯಾಗಮ ಜಾರಿ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಸಂಬಂಧ 1 ರಿಂದ 09 ನೇ ತರಗತಿ ವರೆಗೆ ವಿದ್ಯಾಗಮಗೆ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ವಿದ್ಯಾರ್ಥಿಗಳನ್ನು ತಲಾ 25 ವಿದ್ಯಾರ್ಥಿಗಳಂತೆ ತಂಡ ಮಾಡಿಕೊಳ್ಳಬೇಕು. ಪ್ರತಿ 25 ವಿದ್ಯಾರ್ಥಿಗಳ ತಂಡಕ್ಕೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಬೇಕು. ಅವರ ಉಸ್ತುವಾರಿಯಲ್ಲಿ ಶಾಲೆಯಲ್ಲಿ ವಿದ್ಯಾಗಮ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕು ಜಾಸ್ತಿಯಾದಲ್ಲಿ ಆನ್‌ಲೈನ್ ಹಾಗೂ ವಿದ್ಯಾಗಮ ಎರಡನ್ನೂ ಏಕಕಾಲದಲ್ಲಿ ಅನುಷ್ಠಾನ ಮಾಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಮೊಬೈಲ್, ಕಂಪ್ಯೂಟರ್ ಅಂತರ್ಜಾಲ ಸಂಪರ್ಕ ಸೌಲಭ್ಯವಿಲ್ಲದ ಮಕ್ಕಳು ಶಾಲೆಗೆ ತೆರಳಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ.

ಒಂದು ಶಾಲೆಯಲ್ಲಿ ಪ್ರತಿ ದಿನ ಆರರಿಂದ ಎಂಟು ತರಗತಿಗಳು ನಡೆಯುತ್ತವೆ. ಆದರೆ ವಿದ್ಯಾಗಮ ಅಡಿ ನಾಲ್ಕು ತರಗತಿಗಳಿಗೆ ಸೀಮಿತಗೊಳಿಸಲಾಗಿದೆ. ಇದರ ಜತೆಗೆ ಪಾಳಿ ವ್ಯವಸ್ಥೆಯಲ್ಲಿ ಕಡಿಮೆ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಬೋಧನೆ ಮಾಡಲು ವಿದ್ಯಾಗಮ ಅಡಿ ಸೂಚನೆ ನೀಡಲಾಗಿದೆ. ಮೊಬೈಲ್, ಕಂಪ್ಯೂಟರ್ ಸಾಧನ ಇಲ್ಲದ ಮಕ್ಕಳು ದೇವಸ್ಥಾನ, ವಠಾರ, ಸಮುದಾಯ ಭವನ, ಶಾಲೆ ಆವರಣದಲ್ಲಿ ಕಾಲ್ಪನಿಕ ತರಗತಿ ಕೋಣೆಯಲ್ಲಿ ವಿದ್ಯಾಗಮ ನಡೆಸಲು ಸೂಚಸಲಾಗಿದೆ.

1 ರಿಂದ 5 ನೇ ತರಗತಿ ವರೆಗಿನ ಕಿರಿಯ ಪ್ರಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮತ್ತು ಪರ್ಯಾಯ ಶೈಕ್ಷಣಿಕ ಚಟುವಟಿಕೆ ನಿರ್ವಹಣೆಗೆ ಸಲಹಾತ್ಮಕ ವೇಳಾ ಪಟ್ಟಿಯನ್ನು ಸಹ ಶಿಕ್ಷಣ ಇಲಾಖೆ ನೀಡಿದೆ. 1 ರಿಂದ 3 ನೇ ತರಗತಿ ವರೆಗೆ ವಾರಕ್ಕೆ ಎರಡು ದಿನ, 4 ರಿಂದ 5 ನೇ ತರಗತಿ ವರೆಗೆ ವಾರಕ್ಕೆ ಮೂರು ದಿನ, ಪಾಳಿ ಪದ್ಧತಿಯಲ್ಲಿ ತಲಾ 45 ನಿಮಿಷದಂತೆ ಮೂರು ಅವಧಿಗಳಂತೆ 2. 30 ನಿಮಿಷ ಕಾಲಾವಕಾಶ ನಿಗದಿ ಮಾಡಲಾಗಿದೆ. ಹೀಗೆ 1 ರಿಂದ 9 ನೇ ತರಗತಿ ವರೆಗೆ ವರೆಗೆ ಸಲಹತ್ಮಕ ವೇಳಾ ಪಟ್ಟಿಯನ್ನು ಸಹ ಶಿಕ್ಷಣ ಇಲಾಖೆ ನೀಡಿದೆ.

ಈ ಹಿಂದೆ ಕೊರೊನಾ ಸೋಂಕಿನಿಂದ ಮಕ್ಕಳ ಕಲಿಕೆ ಮೇಲೆ ಭಾರೀ ನಕಾರಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ಮಕ್ಕಳ ಕಲಿಕೆ ಮೇಲೆ ಬೀರುವ ಪರಿಣಾಮ ತಪ್ಪಿಸಿ ನಿರಂತರ ಕಲಿಕೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿದ್ಯಾಗಮ ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಮಕ್ಕಳ ಕಲಿಕೆಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ವಿದ್ಯಾಗಮ ಮರು ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು