ರಾಜಧಾನಿ ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳವಾಗಿದೆ. ಕೊರೋನಾದಿಂದ ಜನ ಚೇತರಿಸಿಕೊಳ್ಳುವ ಮುನ್ನವೇ ಬೆಂಗಳೂರು ದುಬಾರಿ ಆಗುತ್ತಿದೆ.
ಪೆಟ್ರೋಲ್, ಡಿಸೇಲ್ ಹಾಗೂ ತರಕಾರಿ ನಂತರ ಇದೀಗ ಆಟೋ ದರ ಕೂಡ ಏರಿಕೆಯಾಗಿದ್ದು, ಜನ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. 2013ರ ನಂತರ ಇದೇ ಮೊದಲ ಬಾರಿ ಆಟೋ ದರ ಹೆಚ್ಚಳವಾಗಿದೆ.
ಎಂಟು ವರ್ಷಗಳ ನಂತರ ಆಟೋ ಚಾಲಕರು ಮತ್ತು ಮಾಲೀಕರ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿದ್ದು, ಬೆಲೆ ಏರಿಕೆಗೆ ಅಸ್ತು ಎಂದಿದೆ. ಇದರಿಂದ ಚಾಲಕರು ಖುಷಿಯಾಗಿದ್ದಾರೆ. ಆದರೆ ಪ್ರಯಾಣಿಕರು ಹೈರಾಣಾಗಿದ್ದಾರೆ.
ಈ ಹಿಂದೆ ಆಟೋ ಮಿನಿಮಮ್ ದರ ರೂ.25 ಇತ್ತು. ಆದರೆ ಇಂದಿನಿಂದ ಮಿನಿಮಮ್ ದರ ರೂ.30ಕ್ಕೆ ಏರಿಕೆಯಾಗಿದೆ. ಪ್ರತೀ ಕಿ.ಮೀಗೆ ಈ ಹಿಂದೆ 13 ರೂಪಾಯಿ ದರ ಇತ್ತು. ಇದೀಗ ಈ ದರ 15 ರೂಪಾಯಿಗೆ ಏರಿಕೆಯಾಗಿದೆ. ಈ ಹಿಂದೆ ಐದು ನಿಮಿಷ ಕಾಯುವಿಕೆ ಫ್ರೀ ಇತ್ತು. ಇದೀಗ ಐದು ನಿಮಿಷದ ನಂತರ 5 ರೂ. ಹಣ ನೀಡಬೇಕಾಗಿದೆ. ಮೊದಲು ಉಚಿತವಾಗಿ 20ಕೆ.ಜಿವರೆಗೂ ಲಗೇಜ್ ಸಾಗಣೆ ಮಾಡಬಹುದಾಗಿತ್ತು. ಈಗ 20 ಕೆ.ಜಿ ದಾಟಿದರೆ 5 ರೂ. ಹಣ ನೀಡಬೇಕಾಗಿದೆ. ರಾತ್ರಿ ಹಿಂದಿನಂತೆ ಮೀಟರ್ ಮೇಲೆ ಅರ್ಧದಷ್ಟು ಹಣ ಹೆಚ್ಚು ನೀಡಬೇಕಿದೆ.
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ.
ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…
ಜಿಪ್ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ನಲ್ಲಿ ನಡೆದಿದೆ.
ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…