ಬೆಂಗಳೂರು : ಬೇರೆ ಧರ್ಮದ ಹುಡುಗನನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ ತಂಗಿಯ ಬಾಳಿಗೆ ಕೊಳ್ಳಿ ಇಟ್ಟಿದ್ದಾನೆ ಬೆಂಗಳೂರಿನ ರೌಡಿ ಷೀಟರ್ ಅಣ್ಣ. ತಂಗಿಯ ಗಂಡನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ರೌಡಿಶೀಟರ್ ಜಿಲಾನಿ. ಈತನ ಈ ಅಟ್ಟಹಾಸಕ್ಕೆ ಬಲಿಯಾದವನು ಯುವಕ ರಾಹುಲ್.
ಜಿಲಾನಿ ತಂಗಿ ಮತ್ತು ರಾಹುಲ್ ಪ್ರೀತಿಸುತ್ತಿದ್ದರು. ಇದಕ್ಕೆ ತನ್ನ ಅಣ್ಣ ವಿರೋಧ ವ್ಯಕ್ತಪಡಿಸುತ್ತಾನೆ ಎಂದು ತಿಳಿದಿದ್ದ ಆಕೆ ಅಣ್ಣನಿಲ್ಲದ ವೇಳೆ ಮದುವೆಯಾಗಿದ್ದಳು. ಆದರೆ ಈ ವಿಷಯ ಆತನಿಗೆ ತಿಳಿದಿದೆ. ಇದರಿಂದ ಸಿಟ್ಟುಗೊಂಡ ಜಿಲಾನಿ ಸುಪಾರಿ ಕೊಟ್ಟು ತಂಗಿಯ ಗಂಡನನ್ನೇ ಕೊಲೆ ಮಾಡಿಸಿ, ಸಿಕ್ಕಿಬಿದ್ದಿದ್ದಾನೆ.
ಈತ ಇದಾಗಲೇ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ. ಇವನು ಜೈಲಿನಲ್ಲಿದ್ದಾಗ ತಂಗಿ ರಾಹುಲ್ನನ್ನು ಮದುವೆಯಾಗಿದ್ದಾಳೆ. ಇದೇ ಆತನ ಸಾವಿಗೆ ಕಾರಣವಾಗಿವೆ. ಜೈಲಿನಲ್ಲಿ ಇರುವಾಗಲೇ ತಂಗಿ ಹಿಂದೂ ಯುವಕನನ್ನು ಮದುವೆಯಾಗಿರುವ ಸುದ್ದಿ ಈ ಪಾಪಿಗೆ ತಿಳಿದಿದೆ. ಅಲ್ಲಿಂದಲೇ ಸ್ಕೆಚ್ ಹಾಕಿದ ಈತ ತನ್ನ ನಾಲ್ವರು ಸಹಚರರಿಗೆ ಹಣ ಕೊಟ್ಟು ಕೊಲೆಗೆ ಸುಪಾರಿ ಕೊಟ್ಟಿದ್ದಾನೆ.
ಅವರು ರಾಹುಲ್ನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅರ್ಬಾಜ್ ಖಾನ್, ಶೋಹಿಬ್, ನಾಹೀಬ್, ಫೈಸಲ್ ಬಂಧಿತ ಆರೋಪಿಗಳು.
ಮೇ.15 ರಿಂದ ಆರಂಭವಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು ರಾಜ್ಯ…
ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್ನಲ್ಲಿ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…
ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…
ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…