News Karnataka Kannada
Saturday, May 11 2024
ಬೆಂಗಳೂರು ನಗರ

ಬೆಂಗಳೂರು: ಕುಡಿದ ಮತ್ತಿನಲ್ಲಿ ಪತ್ನಿಯ ಮುಖಕ್ಕೆ ಕುದಿಯುವ ಎಣ್ಣೆ ಎರಚಿದ ಪತಿ

Quarrel
Photo Credit :

ಬೆಂಗಳೂರು : ಗಂಡ, ಹೆಂಡತಿ ಸಂಸಾರದಲ್ಲಿ ಜಗಳ , ಭಿನ್ನಾಭಿಪ್ರಾಯ ಎಲ್ಲವೂ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅವೆಲ್ಲ ಹದವಾಗಿದ್ದರೇನೇ ಚೆಂದ. ಎಲ್ಲವೂ ಇದ್ದರೆ ಸಂಸಾರದಲ್ಲಿ ‘ಸರಿಗಮ’, ಆದರೆ ಅವೆಲ್ಲ ವಿಪರೀತವಾದರೆ ಸಂಸಾರವೇ ನಿರ್ಮಾಮ. ಈ ಘಟನೆಯಲ್ಲಿ ಆಗಿದ್ದೂ ಇದೆ. ಇಲ್ಲಿ ಗಂಡನಿಗೆ ವಿಪರೀತ ಕುಡಿತದ ಚಟ. ಹೆಂಡತಿ ಎಷ್ಟು ಹೇಳಿದರೂ ಕೇಳೋದಿಲ್ಲ. ಕೊನೆಗೆ ಅದೇ ಎಣ್ಣೆ ಏಟಲ್ಲಿ ಮಾಡಬಾರದ್ದು ಮಾಡಿ ಬಿಟ್ಟಿದ್ದಾನೆ. ಗಂಡನ ಪಾಪ ಕೃತ್ಯದಿಂದ ಈಗ ಹೆಂಡತಿ ಹಾಗೂ ಮಗಳು ಪರದಾಡುವಂತಾಗಿದೆ.

ಇದು ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿ ನಡೆದಿರುವಂತಹ ಘಟನೆ. ಥಾಮಸ್ ಎಂಬಾತನೇ ಪತ್ನಿ ಹಾಗೂ ಮಗಳ ಮೇಲೆ ದೌರ್ಜನ್ಯ ಎಸಗಿದ ಪಾಪಿ ಪತಿ. ಜೀವನ ನಿರ್ವಹಣೆಗೆ ಅಂತ ಆಟೋ ಓಡಿಸುತ್ತಿರುವ ಥಾಮಸ್, ಅದರಿಂದ ಬಂದ ಹಣದಿಂದಲೇ ಜೀವನ ಸಾಗಿಸುತ್ತಿದ್ದ. ಈ ದುಡಿಮೆಯಿಂದಲೇ ಪತ್ನಿ ಹಾಗೂ ಮಗಳ ಜೀವನವೂ ಸಾಗಬೇಕಿತ್ತು. ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ ಆಟೋ ಚಾಲಕ ಥಾಮಸ್ ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ. ಪತ್ನಿ, ಮಗಳು ಬೇಕಿದ್ದರೆ ಉಪವಾಸ ಬೀಳಲಿ. ಅದಕ್ಕೆಲ್ಲ ಥಾಮಸ್ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಒಂದು ದಿನ ಊಟ ಬಿಟ್ಟರೂ, ಕುಡಿಯುವುದನ್ನು ಮಾತ್ರ ತಪ್ಪಿಸುತ್ತಾ ಇರಲಿಲ್ಲ. ಇದೇ ಕಾರಣಕ್ಕೆ ಮನೆಯಲ್ಲಿ ಪತ್ನಿ ಹಾಗೂ ಥಾಮಸ್ ನಡುವೆ ಆಗಾಗ ಗಲಾಟೆ ಆಗುತ್ತಿತ್ತು.

ಕಳೆದ ಭಾನುವಾರ ಥಾಮಸ್ ಎಂದಿನಂತೆ ಕುಡಿದು ಬಂದಿದ್ದಾನೆ. ಮನೆಯಲ್ಲಿ ಅಡುಗೆ ಆಗುವ ಮುನ್ನವೇ ಅಕ್ಕಪಕ್ಕದ ಮನೆಗಳಿಗೆ ಹೋಗಿ, ಅಲ್ಲಿನವರೊಂದಿಗೆ ಮಾತನಾಡುತ್ತಾ ಕಾಲಹರಣ ಮಾಡಿದ್ದಾನೆ. ಅದಾದ ಬಳಿಕ ಮಧ್ಯಾಹ್ನ ಊಟದ ಸಮಯದಲ್ಲಿ ಮನೆಗೆ ವಾಪಸ್ ಬಂದಿದ್ದಾನೆ. ಆಗ ಹೆಂಡತಿ ಅಂಥೋಣಿಯಮ್ಮ ಟಿವಿ ನೋಡುತ್ತಾ ಕುಳಿತಿದ್ದಳು. ಪುಟ್ಟ ಮಗಳು ಮಲಗಿ, ನಿದ್ದೆ ಮಾಡುತ್ತಾ ಇದ್ದಳು. ಆಗ ಇದ್ದಕ್ಕಿದ್ದಂತೆ ಥಾಮಸ್ ಜಗಳ ಶುರು ಮಾಡಿಕೊಂಡಿದ್ದಾನೆ.

ಅದಾದ ಬಳಿಕ ಅಂಥೋಣಿಯಮ್ಮ ಅಡುಗೆ ಮಾಡುವುದಕ್ಕೆ ಅಂತ ಅಡುಗೆ ಕೋಣೆಗೆ ಹೋಗಿದ್ದಾಳೆ. ಆಗ ಕಟ್ಟಿಗೆಯಿಂದ ಆಕೆಯನ್ನು ಥಳಿಸಿದ ಥಾಮಸ್, ಹಿಗ್ಗಾಮುಗ್ಗ ಹೊಡೆದಿದ್ದಾನೆ. ಸಾಲದ್ದಕ್ಕೆ ಆಕೆ ಕುದಿಸುತ್ತಿದ್ದ ಎಣ್ಣೆಯನ್ನೇ ಮುಖಕ್ಕೆ ಎರಚಿದ್ದಾನೆ. ಇಬ್ಬರ ಜಗಳ ಕೇಳಿ ಪುಟ್ಟ ಮಗಳು ಓಡೋಡಿ ಬಂದಿದ್ದಾಳೆ. ಅವಳ ಮೇಲೂ ಬಿಸಿ ಎಣ್ಣೆ ಎರಚುವ ಯತ್ನ ಮಾಡಿದ್ದಾನೆ. ಘಟನೆಯಲ್ಲಿ ಅಂಥೋಣಿಯಮ್ಮನ ಮುಖ, ಎದೆ ಸೇರಿದಂತೆ ದೇಹದ ಹಲವೆಡೆ ಗಂಭೀರ ಗಾಯವಾಗಿದೆ. ಪುಟ್ಟ ಮಗುವಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಆಟೋ ಚಾಲಕ ಅಂಥೋಣಿ ಬರೀ ಕುಡಿತದ ಚಟವನ್ನು ಮಾತ್ರ ಹೊಂದಿರಲಿಲ್ಲ. ಅದರೊಂದಿಗೆ ಆತನಿಗೆ ಅನುಮಾನ ರೋಗವೂ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಆಗಾಗ ಕುಡಿದು ಬಂದು ಗಲಾಟೆ ಮಾಡುತ್ತಿದ್ದುದಲ್ಲದೇ, ಪತ್ನಿ ಹಾಗೂ ಮಗುವಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ.

ಆಸ್ಪತ್ರೆಯಲ್ಲಿ ಪತ್ನಿ ನರಳಾಟ, ಪತಿ ಅರೆಸ್ಟ್

ಸದ್ಯ ಅಕ್ಕಪಕ್ಕದ ಜನ ಅಂಥೋಣಿಯಮ್ಮ ಹಾಗೂ ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆ ಆಸ್ಪತ್ರೆಯಲ್ಲಿ ಸುಟ್ಚ ಗಾಯಗಳಿಂದ ನರಳುತ್ತಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಪತ್ತೆಯಾಗಿರೋ ಥಾಮಸ್‌ಗಾಗಿ ಬಲೆ ಬೀಸಿದ್ದರು. ಇದೀಗ ಪಾಪಿ ಪತಿ ಅರೆಸ್ಟ್ ಆಗಿದ್ದಾನೆ. ತಾನು ಮಾಡಿದ ತಪ್ಪಿಗೆ ಆತ ಜೈಲು ಸೇರಿದ್ರೆ, ಹೆಂಡತಿ ಆಸ್ಪತ್ರೆಯಲ್ಲಿ ನರಳುತ್ತಿದ್ದಾಳೆ. ಅಪ್ಪ-ಅಮ್ಮನ ಜೊತೆ ಇರಬೇಕಾಗಿದ್ದ ಮಗು ಮಾತ್ರ ಕಂಗಾಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು