ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಬೆಂಗಳೂರು-ಇಂಡಿಯಾ ನ್ಯಾನೊ ಸಮಾವೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ಐಟಿ,ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ವಿಜ್ಞಾನಿ ಸಿ.ಎನ್. ಆರ್ ರಾವ್ ಸೇರಿದಂತೆ ಅನೇಕ ಪ್ರತಿನಿಧಿಗಳು ವಿಡಿಯೋ ಮುಖೇನ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
ಸುಸ್ಥಿರ ಅಭಿವೃದ್ಧಿಗಾಗಿ ನ್ಯಾನೊ ತಂತ್ರಜ್ಞಾನ ಎನ್ನುವ ಧ್ಯೇಯದೊಂದಿಗೆ 12 ನೇ ವರ್ಷದ ಸಮಾವೇಶ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ವರ್ಚ್ಯುಯಲ್ ಮಾದರಿ ಅನುಸರಿಸಲಾಗಿದೆ.
ನ್ಯಾನೋ ಸಮಾವೇಶದಲ್ಲಿ ಕೆನಡಾ,ಇಸ್ರೇನ್, ಜರ್ಮನಿ, ನೆದರ್ಲೆಂಡ್ಸ್ ಹಾಗೂ ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳು ಭಾಗವಹಿಸಲಿವೆ.