ಬೆಂಗಳೂರಿನಿಂದ ಪಾಟ್ನಾಗೆ ಹೊರಟಿದ್ದ ಗೋ ಏರ್ ವಿಮಾನವು ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ 139 ಪ್ರಯಾಣಿಕರಿದ್ದು, ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಶವಾಗಿದೆ ಎಂದು ಏರ್ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
“ವಿಮಾನದ ಎಂಜಿನ್ನಲ್ಲಿ ಏನೋ ದೋಷವಾಗಿರುವ ಬಗ್ಗೆ ಅರಿತ ಪೈಲಟ್ ನಾಗ್ಪುರದ ಏರ್ ಟ್ರಾಫಿಕ್ ಕಂಟ್ರೋಲರ್ಗೆ ಮಾಹಿತಿ ನೀಡಿದರು ಮತ್ತು ನಾಗ್ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಅನುಮತಿ ಕೇಳಿದರು. ಅನುಮತಿ ನೀಡುವುದರ ಜೊತೆಗೆ ಏನಾದರೂ ಅನಾಹುತ ಸಂಭವಿಸಿದರೆ ಅದನ್ನು ನಿಯಂತ್ರಿಸಲು ಬೇಕಾಗುವ ಅಗ್ನಿಶಾಮಕದಳದ ಸಿಬ್ಬಂದಿ, ವೈದ್ಯರು, ಆಂಬುಲೆನ್ಸ್ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂದೆವು. ಆದರೆ ಯಾವುದೇ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ” ಎಂದು ನಾಗ್ಪುರ ಏರ್ಪೋರ್ಟ್ ನಿರ್ದೇಶಕ ಅಬಿಡ್ ರುಹಿ ಹೇಳಿದ್ದಾರೆ.
“ಸಂಜೆ 4:45ಕ್ಕೆ ಪಾಟ್ನಾಗೆ ತೆರಳುವ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಇಂಜಿನಿಯರಿಂಗ್ ತಂಡದಿಂದ ವಿಮಾನವನ್ನು ತಪಾಸಣೆ ನಡೆಸಲಾಗುತ್ತಿದೆ. ಪ್ರಯಾಣಿಕರು ಗೋ ಏರ್ ಟರ್ಮಿನಲ್ನಲ್ಲಿ ಕಾಯುತ್ತಿದ್ದಾರೆ ಮತ್ತು ಅವರಿಗೆ ಬೇಕಾಗುವ ಹೆಚ್ಚಿನ ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ರುಹಿ ಅವರು ಹೇಳಿದ್ದಾರೆ.