ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ವಾಹನ ಸಂಚಾರ ಹಾಗೂ ಜನಜೀವನದ ಮೇಲೆ ಪ್ರಭಾವ ಬೀರಿದೆ.
ನಗರದ ಹಲವಾರು ಕಡೆಗಳಲ್ಲಿ ಮಳೆ ಸುರಿದಿದ್ದು, ರಾತ್ರಿ ಹತ್ತು ಗಂಟೆಗೆ ಆರಂಭವಾದ ಮಳೆಯು ಮುಂಜಾನೆ ತನಕ ಸುರಿದಿದೆ. ಎಜಿಪುರ, ವನ್ನರಪೇಟೆ,ನಯಂದಹಳ್ಳಿ, ಶೇಷಾದ್ರಿಪುರಂಗನಲ್ಲಿ ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ.
ಬಿಬಿಎಂಪಿಯ ವಿಪತ್ತು ನಿರ್ವಹಣಾ ತಂಡವು ರಾತ್ರಿ ವೇಳೆ ರಸ್ತೆಗಳಲ್ಲಿ ತುಂಬಿದ್ದ ನೀರನ್ನು ಹರಿದುಹೋಗುವಂತೆ ಮಾಡುವಲ್ಲಿ ಶ್ರಮಿಸಿದೆ.